- Learn Kannada
- Know Karnataka
ಪ್ರಬಂಧ ಬರೆಯುವುದು ಹೇಗೆ? How to Write Competitive Kannada Essays
ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ನಾಗರಿಕ ಸೇವಾ ಪರೀಕ್ಷೆ, ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆ, ಫಾರೆಸ್ಟ್ ಸರ್ವಿಸ್ ಇತ್ಯಾದಿ ಪರೀಕ್ಷೆಗಳ ಮುಖ್ಯ ಪತ್ರಿಕೆಗಳಲ್ಲಿವಿಸ್ತೃತ ರೂಪದ/ಪ್ರಬಂಧ ಮಾದರಿಯ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ನಾಗರಿಕ ಸೇವಾ ಪರೀಕ್ಷೆಯಲ್ಲಿಸಮಾರು 1750 ಅಂಕಗಳಿಗೆ ಏಳು ಪತ್ರಿಕೆಗಳನ್ನು ಹಾಗೂ 600 ಅಂಕಗಳಿಗೆ ಎರಡು ಕಡ್ಡಾಯ ಭಾಷಾ ಪತ್ರಿಕೆಗಳನ್ನು ವಿಸ್ತೃತ ರೂಪದ ಮಾದರಿಯಲ್ಲಿ ಕೇಳಲಾಗಿರುತ್ತದೆ.
ಪ್ರಬಂಧದಲ್ಲಿ ಪ್ರಮುಖವಾಗಿ ಎರಡು ಪ್ರಕಾರಗಳಿವೆ.
- ಒಂದು ಸಾಮಾನ್ಯ ಪ್ರಬಂಧ
- ಇನ್ನೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಪ್ರಬಂಧ
ಸಾಮಾನ್ಯ ಪ್ರಬಂಧವನ್ನು ನಾವು ಶಾಲಾ ಕಾಲೇಜುಗಳಲ್ಲಿಬರೆದಿರುವಂತಹುದು. ಇನ್ನೊಂದು ರೀತಿಯ ಪ್ರಬಂಧವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಪ್ರಬಂಧಕ್ಕೆ ಉತ್ತರ ಬರೆಯುವಾಗ ಅಲ್ಲಿನಮಗೆ ಮುಖ್ಯವಾಗಿ ವಿಷಯದ ವಿವರಣೆಗೆ ಆದ್ಯತೆ ನೀಡಲಾಗುತ್ತದೆ. ಆದ್ದರಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಬಂಧದಲ್ಲಿನಾವೀಣ್ಯತೆ ಹಾಗೂ ಪ್ರಸ್ತುತ ಪಡಿಸುವಿಕೆಯ ಅತಿ ಮಹತ್ವ ವಹಿಸುತ್ತದೆ.
ಶಾಲಾ-ಕಾಲೇಜುಗಳಲ್ಲಿಬರೆಯುವ ಉತ್ತರಗಳಿಗೂ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬರೆಯುವ ಉತ್ತರಗಳಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಬರವಣಿಗೆ ಕೌಶಲ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ಸಫಲತೆಯಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದುತ್ತದೆ. ಇದಕ್ಕಾಗಿ ಪರೀಕ್ಷೆಗೂ ಮುಂಚಿತವಾಗಿಯೇ ಸಾಕಷ್ಟು ಬರವಣಿಗೆಯ ಅಭ್ಯಾಸ ಮಾಡಿಕೊಳ್ಳುವುದು ಅನಿವಾರ್ಯ.
ಉತ್ತಮ ಪ್ರಬಂಧ ಬರೆಯಲು ಇದು ಗಮನವಿರಲಿ
ಮುಖ್ಯವಾಗಿ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
- ಪ್ರಶ್ನೆಯನ್ನು ಸರಿಯಾಗಿ ಓದಿಕೊಂಡು ಅರ್ಥಮಾಡಿಕೊಳ್ಳುವುದು
- ಕೇಳಿರುವ ಪದಗಳ ಮಿತಿಯನ್ನು ಮೀರದಂತೆ ಉತ್ತರಗಳನ್ನು ಬರೆಯುವುದು
ಪ್ರತಿಯೊಂದು ಪ್ರಶ್ನೆಯು ಒಂದು ನಿರ್ದಿಷ್ಟವಾದ ಕೀ-ಪದವನ್ನು ಹೊಂದಿರುತ್ತದೆ. ಉದಾಹರಣೆಗೆ: ವಿಮರ್ಶಿಸಿ, ಟಿಪ್ಪಣಿ ಬರೆಯಿರಿ, ವಿಶ್ಲೇಷಿಸಿ, ಚರ್ಚಿಸಿ, ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ ಇತ್ಯಾದಿ. ಈ ಕೀ-ಪದಗಳು ಬಹಳ ಮುಖ್ಯವಾದವುಗಳು. ಇವುಗಳ ಅರ್ಥವನ್ನು ಅಭ್ಯರ್ಥಿಗಳು ಚೆನ್ನಾಗಿ ತಿಳಿದುಕೊಂಡಿರಬೇಕು.
ಬರವಣಿಗೆಯ ಅಭ್ಯಾಸದ ಮಹತ್ವ
ಎಷ್ಟೋ ಬಾರಿ ಪರೀಕ್ಷೆ ಬರೆದ ಅಭ್ಯರ್ಥಿಗಳು, ನಾನು ಎಲ್ಲಪ್ರಶ್ನೆಗಳಿಗೆ ಉತ್ತರಿಸಿದ್ದೆ. ಆದರೆ ಅಂಕಗಳೇ ಸಿಕ್ಕಿಲ್ಲಅಥವಾ ನಾನು ಬಹಳ ಕಷ್ಟಪಟ್ಟು ಬರೆದಿದ್ದೆ. ಕೇಳಿದ್ದಕ್ಕಿಂತ ಹೆಚ್ಚಾಗಿಯೇ ಉತ್ತರಗಳನ್ನು ಬರೆದಿದ್ದೆ. ಆದರೂ ಉತ್ತೀರ್ಣನಾಗಲು ಸಾಧ್ಯವಾಗಲಿಲ್ಲ. ಪರೀಕ್ಷಾ ವ್ಯವಸ್ಥೆಯೇ ಸರಿಯಿಲ್ಲವೆಂದು ಕೊರಗುವುದನ್ನು ನಾವು ಸಾಮಾನ್ಯವಾಗಿ ಕಂಡಿರುತ್ತೇವೆ. ಆದರೆ, ಅಭ್ಯರ್ಥಿಗಳು ಬೇರೆಯವರನ್ನು ಅಥವಾ ಪರೀಕ್ಷಾ ವ್ಯವಸ್ಥೆಯನ್ನು ದೂಷಿಸುವುದಕ್ಕೂ ಮುಂಚಿತವಾಗಿ, ತಮಗೆ ತಾವೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಬರವಣಿಗೆಯ ಅಂದ ಮತ್ತು ಬರೆಯುವ ವೇಗ
ವಿಸ್ತೃತ ಮಾದರಿಯ ಪ್ರಶ್ನೆಗಳನ್ನು ಉತ್ತರಿಸುವುದಕ್ಕೆ ನಿಮ್ಮ ಬರವಣಿಗೆ ಅಂದ ಉತ್ಕೃಷ್ಟವಾಗಿರಬೇಕೆಂದೇನೂ ಇಲ್ಲ. ಪ್ರಶ್ನೆಗೆ ಸಂಬಂಧಿತ ಉತ್ತರವನ್ನು ಮೌಲ್ಯಮಾಪಕರಿಗೆ ತಿಳಿಯುವಂತೆ ಮತ್ತು ನಿಮ್ಮ ಸ್ವಂತ ಪದಗಳಲ್ಲಿ ಮನವರಿಕೆಯಾಗುವಂತೆ ಸ್ಪಷ್ಟವಾಗಿ ಬರೆದರೆ ಸಾಕು.
ವೇಗವಾಗಿ ಬರೆಯುವ ಕಲೆ ಕೇವಲ ಸತತ ಅಭ್ಯಾಸದಿಂದ ಮಾತ್ರ ಸಾಧ್ಯವಾಗುತ್ತದೆ. ಪರೀಕ್ಷೆಗೂ ಮುಂಚಿತವಾಗಿ ನೀವು ಸಾಕಷ್ಟು ಮಾದರಿ ಪ್ರಶ್ನೆಗಳಿಗೆ ನಿಯಮಿತ ಸಮಯದಲ್ಲಿಉತ್ತರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹಾಗೂ ವಿಷಯ ತಜ್ಞರ ಬಳಿ ಸಲಹೆಯನ್ನು ಪಡೆಯಬೇಕು. ಸಾಕಷ್ಟು ಅಣಕು ಪರೀಕ್ಷೆಗಳನ್ನು ಬರೆದು ಅಭ್ಯಾಸ ಮಾಡಿ. ಹೀಗೆ ಮಾಡುವುದರಿಂದ ಮಾತ್ರ ನಿಮ್ಮ ಬರವಣಿಗೆಯ ವೇಗವನ್ನು ಸುಧಾರಿಸಿಕೊಳ್ಳಲು ಸಾಧ್ಯ.
ಸ್ಪಷ್ಟ ಹಾಗೂ ಸರಳ ಬರವಣಿಗೆ
ಪರೀಕ್ಷೆಯಲ್ಲಿ ಯಶಸ್ಸು ಸಿಗದೆ ಇರುವುದಕ್ಕೆ ಕಳಪೆ ಬರವಣಿಗೆ ಕೂಡ ಒಂದು ಮುಖ್ಯ ಕಾರಣ. ನಿಜವಾಗಿಯೂ ತಾನು ಪ್ರಶ್ನೆಯ ನಿರೀಕ್ಷೆಯಂತೆ ಉತ್ತರಗಳನ್ನು ಬರೆದಿದ್ದೇನೆಯೇ ಇಲ್ಲವೆ ಎಂಬುದನ್ನು ಕಂಡುಕೊಂಡು, ಮುಂದಿನ ಪರೀಕ್ಷೆಯಲ್ಲಿ ತಪ್ಪುಗಳು ಮರುಕಳಿಸದಂತೆ, ಯೋಚನೆ ಮಾಡಿ ಉತ್ತರಗಳನ್ನು ಬರೆಯಬೇಕು.
Tips for Kannada Essay Writing / ಉತ್ತಮ ಪ್ರಬಂಧಕ್ಕೆ ಸಲಹೆಗಳು
ಪ್ರಬಂಧ ಬರೆಯುತ್ತಿರುವಾಗ ಒಂದು ವೇಳೆ ತಪ್ಪಾದರೆ ಅತಿಯಾದ ಗೀಟುಗಳನ್ನು ಹಾಕಬಾರದು ಕೇವಲ ಒಂದು ಅಡ್ಡಗೆರೆಯನ್ನು ಹಾಕಬಹುದು. ನೆನಪಿಡಿ ತಪ್ಪುಗಳ ಸಹಜ ಆದರೆ ಆ ತಪ್ಪನ್ನು ಮುಚ್ಚಲು ನಿಮ್ಮ ಪತ್ರಿಕೆಯನ್ನು ಹಾಳು ಮಾಡಬಾರದು. ಇದರಿಂದ ಮೌಲ್ಯಮಾಪಕರಿಗೆ ಕಿರಿಕಿರಿಯಾಗಿ, ಅವರ ಮೇಲೆ ಪ್ರಭಾವ ಬೀರಬಹುದು.
ಪ್ರಬಂಧವನ್ನು ಯಾವುದೇ ಒಂದು ನಿರ್ದಿಷ್ಟ ಪುಸ್ತಕವನ್ನು ನೋಡಿ ಅದರಲ್ಲಿರುವ ವಿಷಯವನ್ನು ಕಂಠಪಾಠ ಮಾಡಿ ಇರುವಂತೆಯೆ ಬರೆಯಬಾರದು. ಆ ವಿಷಯವನ್ನು ಅರ್ಥೈಸಿಕೊಂಡು ನಿಮ್ಮ ಪದಗಳಲ್ಲಿಅದನ್ನು ಮಂಡಿಸಿರಿ. ಪ್ರಬಂಧ ಎನ್ನುವುದು ಒಂದು ವಿಷಯವನ್ನು ನಾವೆಷ್ಟು ಸರಿಯಾಗಿ ತಿಳಿದುಕೊಂಡಿದ್ದೇವೆ ಎನ್ನುವುದನ್ನು ಪರೀಕ್ಷಿಸುವುದಾಗಿದೆ.
ಯಾವ ವಿಭಾಗಕ್ಕೆ ಎಷ್ಟು ಸಮಯವನ್ನು ನಿಗದಿಪಡಿಸಬೇಕು ಹಾಗೂ ಎಷ್ಟು ಸಮಯದಲ್ಲಿನಾವು ನಮ್ಮ ಪತ್ರಿಕೆಯನ್ನು ಪೂರ್ಣಗೊಳಿಸಬೇಕು ಎಂಬುವುದನ್ನು ಪೂರ್ವ ನಿಗದಿಪಡಿಸಿಕೊಳ್ಳುವುದು.
ಪ್ರಬಂಧದಲ್ಲಿಧಾರ್ಮಿಕ ಚಿಹ್ನೆಗಳನ್ನು, ದೇವರ ಚಿತ್ರಗಳನ್ನು ಅಥವಾ ವಿವಾದಿತ ಸಂಕೇತಗಳನ್ನು ಬಳಸಬಾರದು. ಉದಾ: ಶ್ರೀಗಣೇಶಾಯ ನಮಃ, ಓಂ ನಮಃ ಶಿವಾಯ ಸ್ವಸ್ತಿಕ್, ಸಿಲುಬೆ ಇತ್ಯಾದಿಗಳನ್ನು ಪತ್ರಿಕೆಯಲ್ಲಿಬರೆಯಬಾರದು.
ಪ್ರಬಂಧಕ್ಕೆ ಅಂದ ಹೆಚ್ಚಲು ಗಾದೆ ಮಾತುಗಳನ್ನು ಸೂಕ್ತಿಗಳನ್ನು, ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನು ಬಳಸಿ. ಆದರೆ ಸೂಕ್ತಿ ಅಥವಾ ಗಾದೆ ಮಾತುಗಳೆ ನಿಮ್ಮ ಪ್ರಬಂಧವನ್ನು ಆವರಿಸದಂತೆ ಎಚ್ಚರಿಕೆವಹಿಸಿ.
ನಕ್ಷೆಗಳನ್ನು ಅವಶ್ಯಕತೆಗೆ ಅನುಗುಣವಾಗಿ ಪ್ರಬಂಧದಲ್ಲಿ ಬಳಸಬಹುದು. ಉದಾ : ಫೀಶ್ ಬೋನ್ ಚಾರ್ಟ್ ನದಿಯ ಹರಿಯುವಿಕೆ, ಅಂತರಾಷ್ಟ್ರೀಯ ಗಡಿ ಸಮಸ್ಯೆ ಇತ್ಯಾದಿ ಸಂದರ್ಭದಲ್ಲಿನಕ್ಷೆಗಳನ್ನು ಬಳಸುವುದು ಉತ್ತಮ. ಅವಶ್ಯಕತೆಗೆ ಅನುಗುಣವಾಗಿ ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನು ಬಳಸಿದರೆ ಅದು ನಿಮ್ಮ ಪ್ರಬಂಧಕ್ಕೆ ಮೌಲ್ಯ ಕೊಡುತ್ತದೆ.
Reference: Essay topics for practice | Kannada State Police Exam Essays for Download
ಪ್ರಬಂಧ ಉದಾಹರಣೆಗಳು / Kannada Essays for Reference
Switch to the dark mode that's kinder on your eyes at night time.
Switch to the light mode that's kinder on your eyes at day time.
ಕನ್ನಡ ನಾಡಿನ ಹಿರಿಮೆ ಪ್ರಬಂಧ | Kannada Nadina Hireme Prabandha in Kannada
ಕನ್ನಡ ನಾಡಿನ ಹಿರಿಮೆ ಪ್ರಬಂಧ, Kannada Nadina Hireme Prabandha in Kannada, Greatness of Kannada Nation Essay in Kannada Kannada Nadina Hireme Prabandha ಕನ್ನಡದಲ್ಲಿ
Kannada Nadina Hireme Prabandha in Kannada
ಕನ್ನಡ ನಾಡಿನ ಹಿರಿಮೆ ಪ್ರಬಂಧ
ಕರುನಾಡ ನೆಲ, ಜಲ, ಜನ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡಿದೆ. ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಕನ್ನಡ… ಕನ್ನಡ. ಕಸ್ತೂರಿ. ಕನ್ನಡ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. “ ಕನ್ನಡ ಭಾಷೆ ನಮ್ಮ ಸಂಸ್ಕೃತಿ” , ಕರ್ನಾಟಕವು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ ಮತ್ತು ಅದು ನಮ್ಮ ಗುರುತಾಗಿದೆ.
ವಿಷಯ ವಿವರಣೆ :
ಹಳೆಯ ಪ್ರಾಚೀನ ಶತಮಾನದಲ್ಲಿ ಅಂದರೆ ೨೦ನೆಯ ಶತಮಾನದಲ್ಲಿ ಕನ್ನಡ ಭಾಷೆಯು ಬಹಳ ಅಭಿವೃದ್ದಿಯಲ್ಲಿ ಪ್ರಾರಂಭವಾಯಿತು. ಅಭಿಜಾತ ಭಾಷೆಯೆಂಬ ಸ್ಥಾನವನ್ನು ಕೇಂದ್ರ ಸರಕಾರದಿಂದ ಕನ್ನಡ ಭಾಷೆಯು ಪಡೆದಿದೆ. ಅಂತರಜಾಲದಲ್ಲಿ ಕನ್ನಡ ಭಾಷೆಯು ಬಹಳವಾಗಿದೆ. ಕನ್ನಡ ಭಾಷೆಯು ವ್ಯಾಪಾರ ಮತ್ತು ವಾಣಿಜ್ಯ ಅಲ್ಲದೇ ಪ್ರತಿಯೊದು ಕ್ಷೇತ್ರದಲ್ಲಿಯೂ ಉತ್ತಮ ಭಾಷೆಯಾಗಿ ಬೆಳೆಯುತ್ತಿದೆ.
ಕರ್ನಾಟಕ ಎಂಬ ಪದವು ಸಂಸ್ಕೃತ ಭಾಷೆಯಿಂದ ಬಂದಿದೆ. ಸಂಸ್ಕೃತ ಭಾಷೆಯಿಂದ ಕನ್ನಡ ಎಂಬ ಪದವು ಅಂದರೆ ಕರ್ನಾಟಕವು ಹುಟ್ಟಿದೆ ಎಂದು ಹೇಳಬಹುದು. ಇದರ ಅರ್ಥ ಕನ್ನಡ ನಾಡು ಎನ್ನಲಾಗಿದೆ. ಆದರೆ ಕರ್ನಾಟಕ ಎಂಬ ಪದದ ಹುಟ್ಟು, ಕರು+ನಾಡು= ಕರುನಾಡು ಎಂಬ ಪದವು ಕರ್ನಾಟಕವಾಯಿತು ಎಂದು ಹೇಳಲಾಗುತ್ತದೆ. ಕರು ಎಂದರೆ ಕಪ್ಪು , ಇದರರ್ಥ ಕಪ್ಪು ಮಣ್ಣಿನ ನಾಡು ಎಂದೂ ಸಹ ಕರ್ನಾಟಕವನ್ನು ಕರೆಯಲಾಗುತ್ತದೆ.
ಕನ್ನಡ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಬಹುದಾದ ಕಾಲಮಾನಗಳನ್ನು ಈ ಕೆಳಗಿನಂತೆಯೂ ನಿಷ್ಕರ್ಷಿಸಿದ್ದಾರೆ.
- ಪೂರ್ವದ ಹಳಗನ್ನಡ – ಅನಿಶ್ಚಿತ ಕಾಲಘಟ್ಟದಿಂದ ೭ನೇಯ ಶತಮಾನದವರೆಗೆ;
- ಹಳಗನ್ನಡ – ೭ರಿಂದ ೧೨ನೆಯ ಶತಮಾನದವರೆಗೆ;
- ನಡುಗನ್ನಡ – ೧೨ನೆಯ ಶತಮಾನದ ಪ್ರಾರಂಭದಿಂದ ೧೮ನೆಯ ಶತಮಾನದವರೆಗೆ;
- ಹೊಸಗನ್ನಡ – ೧೮ನೆಯ ಶತಮಾನದ ಆದಿಯಿಂದ ಈಚೆಗೆ.
ಸುಮಾರು ಎರಡೂವರೆ ಶತಮಾನವನ್ನು ಹೊಂದಿರುವ ಶ್ರೀಮಂತ ಭಾಷೆಯು ಕನ್ನಡವಾಗಿದೆ. ಕನ್ನಡ ಭಾಷೆಯು ವಿಶ್ವದಲ್ಲಿ ಪ್ರಾಚೀನ ಭಾಷೆಯಾಗಿದೆ. ಆದರೆ ಇಂದಿನ ಆಧುನಿಕ ಕಾಲದಲ್ಲಿ ಪ್ರತಿಯೊಬ್ಬ ತಂದೆ-ತಾಯಿಗಳು ಮಕ್ಕಳಿಗೆ ಕನ್ನಡ ನಾಡಿನ ಭಾಷೆ, ಸಂಸ್ಕೃತಿಯ ಆಚಾರ ವಿಚಾರವನ್ನು ತಿಳಿ ಹೇಳುತ್ತಿಲ್ಲ. ಮಕ್ಕಳು ಕೂಡ ಕನ್ನಡ ಭಾಷೆ ಮಾತನಾಡದಂತೆ ಅವರಿಗೆ ಹೇಳುತ್ತಾರೆ. ಇದು ಕನ್ನಡಿಗರಾಗಿಯೂ ಪ್ತತಿಯೊಬ್ಬ ತಂದೆ ತಾಯಿಗಳು ವ್ಯರ್ಥ ಎನ್ನಬಹುದು.
ಪ್ರತಿ ಜನಾಂಗದವರು ಇಲ್ಲಿ ವಾಸಿಸುತ್ತಿದ್ದು, ಎಲ್ಲಾ ಧರ್ಮದವರು ಒಂದೇ. ಎಲ್ಲೇ ಇದ್ದರು ಪ್ರತಿಯೊಬ್ಬ ಕನ್ನಡಿಗನೂ ಕನ್ನಡತನವನ್ನು ಕೊಂಡಾಡಬೇಕು, ಕನ್ನಡವನ್ನು ಉಳಿಸಬೇಕು. ಯಾವುದೇ ಕನ್ನಡ ಪರ ಸಂಘಟನೆಗಳು ಸಹ ನವೆಂಬರ್ 1 ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಾಗಿರದೆ, ಪ್ರತಿದಿನವೂ ಕನ್ನಡತನವನ್ನು ಮೆರೆಯಬೇಕು. ಕನ್ನಡ ಪರ ಹೋರಾಟಗಳು ಪ್ರತಿದಿನವೂ ಕನ್ನಡ ಭಾಷೆ, ಸಂಸ್ಕೃತಿ, ಕನ್ನಡ ನಾಡನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬ ಕನ್ನಡಿಗನ ಹೊಣೆ ಜವಾಬ್ದಾರಿಯಾಗಿರುತ್ತದೆ.
ಕನ್ನಡದ ಇತಿಹಾಸ, ಮಹತ್ವ, ಕನ್ನಡ ಭಾಷೆ, ಸಂಸ್ಕೃತಿ, ಕನ್ನಡದ ವೈವಿಧ್ಯತೆಯನ್ನು ಮುಂದೆ ಬರುವ ಮಕ್ಕಳಿಗೆ ಪ್ರತಿಯೊಬ್ಬರೂ ತಿಳಿಸುವುದು ಎಲ್ಲರ ಕರ್ತವ್ಯವಾಗಿದೆ. ಕರ್ನಾಟಕ ಏಕೀಕರಣಕ್ಕೆ ಹಲವಾರು ಗಣ್ಯರ ಹೋರಾಟದ ಪ್ರತಿಫಲವು ಕನ್ನಡ ರಾಜ್ಯೋತ್ಸವವಾಗಿದೆ. ಕನ್ನಡಿಗರು ಆಚರಿಸುವ ಹಬ್ಬಗಳನ್ನು ಬೇರೆ ಭಾಷೆಯ ಜನತೆಯನ್ನು ಕರೆದು ನಮ್ಮ ಸಾಹಿತ್ಯ, ಸಂಸ್ಕೃತಿ ಬಗ್ಗೆ, ನಮ್ಮ ಆಚಾರ-ವಿಚಾರಗಳನ್ನು ಅವರಿಗೆ ಪರಿಚಯ ಮಾಡುವುದು ಹೆಮ್ಮೆಯ ಸಂಗತಿಯಾಗಿದೆ. ಚಿತ್ರಕಲೆ , ಶಿಲ್ಪ ಕಲೆ , ಸಂಗೀತ , ಸಾಹಿತ್ಯ ಮುಂತಾದವುಗಳಲ್ಲಿ ಕನ್ನಡದ ಹಿರಿಮೆಯು ಪ್ರಖ್ಯಾತಿಯಾಗಿದೆ. ಈ ನಾಡಿನ ಜಾನಪದ ಕಲೆ – ಸಂಸ್ಕೃತಿ, ಕವನಗಳು, ವಚನಗಳು, ದಾಸರ ಪದಗಳು ನಮ್ಮ ಕನ್ನಡ ನಾಡಿನ ಹಿರಿತನವನ್ನು ಸೂಚಿಸುತ್ತವೆ.
ಕನ್ನಡ ನಾಡಿನ ಹಿರಿಮೆಯನ್ನು, ವಿದ್ವಾಂಸರು, ಗೌರವವನ್ನು ಕನ್ನಡದ ಕವಿಗಳು, ದಾಸರು, ಜಾನಪದರು, ವಿಭಿನ್ನ ರೀತಿಯಲ್ಲಿ ಸುಮಧುರವಾಗಿ ಹಾಡಿ ಹೊಗಳಿದ್ದಾರೆ. ನಮ್ಮ ಕನ್ನಡ ನಾಡಿನ ಹಿರಿಮೆಯನ್ನು ಮೇಲಕ್ಕೆ ತರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ.
ಕೇವಲ ಕನ್ನಡತನವನ್ನು ಕನ್ನಡ ರಾಜ್ಯೋತ್ಸದಂದು ಮಾತ್ರ ಆಚರಿಸದೇ ಪ್ರತಿದಿನವೂ ಕನ್ನಡದ ಬಗ್ಗೆ ಹೆಮ್ಮೆ ಅಭಿಮಾನ ಪ್ರತಿಯೊಬ್ಬರಲ್ಲೂ ಇರಬೇಕು ಇದು ನಮ್ಮ ನಾಡು ನಮ್ಮ ಹೆಮ್ಮೆ ಎನ್ನುವ ಮನೋಭಾವನ್ನು ಪ್ರತಿಯೊಬ್ಬರ ಮನಸ್ಸಿನಲ್ಲಿ ಇರಬೇಕು.
1. ಕರ್ನಾಟಕ ಎಂಬ ಪದದ ಹುಟ್ಟು ತಿಳಿಸಿ.
ಕರು+ನಾಡು= ಕರುನಾಡು ಎಂಬ ಪದವು ಕರ್ನಾಟಕವಾಯಿತು. ಎನ್ನಲಾಗುತ್ತದೆ. ಕರು ಎಂದರೆ ಕಪ್ಪು , ಇದರರ್ಥ ಕಪ್ಪು ಮಣ್ಣಿನ ನಾಡು ಎಂದೂ ಸಹ ಹೇಳಲಾಗುತ್ತದೆ.
2. ಕನ್ನಡ ರಾಜ್ಯೋತ್ಸವವನ್ನು ಯಾವಾಗ ಆಚರಿಸಲಾಗುತ್ತದೆ ?
ನವೆಂಬರ್ 1 ರಂದು ಆಚರಿಸಲಾಗುತ್ತದೆ.
3. ಕನ್ನಡದ ನಾಡಗೀತೆ ರಚಿಸಿದವರು ಯಾರು ?
ಇತರೆ ವಿಷಯಗಳು :.
ಆನ್ಲೈನ್ ಶಿಕ್ಷಣದ ಬಗ್ಗೆ ಪ್ರಬಂಧ
ನಿರುದ್ಯೋಗ ಪ್ರಬಂಧ
ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಪ್ರಬಂಧ
ಸ್ವಚ್ಛ ಭಾರತ್ ಅಭಿಯಾನ ಪ್ರಬಂಧ
What do you think?
Written by Salahe24
Leave a reply cancel reply.
You must be logged in to post a comment.
GIPHY App Key not set. Please check settings
ಸೈನಿಕರ ಬಗ್ಗೆ ಪ್ರಬಂಧ | Essay on Soldiers in Kannada
ಸ್ಕೂಲ್ ಬ್ಯಾಗ್ ತಯಾರಿಸುವ ಬ್ಯುಸಿನೆಸ್ | School Bag Making Business
© 2024 by bring the pixel. Remember to change this
Username or Email Address
Remember Me
Forgot password?
Enter your account data and we will send you a link to reset your password.
Your password reset link appears to be invalid or expired.
Privacy policy.
To use social login you have to agree with the storage and handling of your data by this website. %privacy_policy%
Add to Collection
Public collection title
Private collection title
No Collections
Here you'll find all collections you've created before.
- Privacy Policy
- Add anything here or just remove it...
- Social Science
- Information
ನನ್ನ ಶಾಲೆ ಪ್ರಬಂಧ | My School Essay In Kannada
ನನ್ನ ಶಾಲೆ ಪ್ರಬಂಧ My School Essay In Kannada nanna shale prabandha nanna shale essay in Kannada ಶಾಲೆಯ ಬಗ್ಗೆ ಪ್ರಬಂಧ
ನನ್ನ ಶಾಲೆಯ ಕುರಿತು ಪ್ರಬಂಧವನ್ನು ಬರೆಯುವುದು ಶಾಲಾ ಪರೀಕ್ಷೆಗಳು, ಮೌಲ್ಯಮಾಪನ ಪರೀಕ್ಷೆಗಳು ಇತ್ಯಾದಿಗಳಲ್ಲಿ ಹೆಚ್ಚು ಕೇಳಲಾಗುವ ವಿಷಯಗಳಲ್ಲಿ ಒಂದಾಗಿದೆ. ಆಗಾಗ್ಗೆ ವಿದ್ಯಾರ್ಥಿಗಳು ಶಾಲೆಯ ಕುರಿತು ಪ್ರಬಂಧಗಳನ್ನು ಬರೆಯಲು ಕೇಳಲಾಗುತ್ತದೆ.
My School Essay In Kannada
ನನ್ನ ಶಾಲೆ ಪ್ರಬಂಧ
ಶಾಲೆಯು ಜನರು ಬಹಳಷ್ಟು ಕಲಿಯುವ ಮತ್ತು ಅಧ್ಯಯನ ಮಾಡುವ ಸ್ಥಳವಾಗಿದೆ ಮತ್ತು ಅದನ್ನು ಜ್ಞಾನದ ದೇವಾಲಯ ಎಂದು ಕರೆಯಲಾಗುತ್ತದೆ. ನಾವೆಲ್ಲರೂ ನಮ್ಮ ಜೀವನದಲ್ಲಿ ಹೆಚ್ಚಿನ ಸಮಯವನ್ನು ನಮ್ಮ ಶಾಲೆ ಅಥವಾ ಶಾಲೆಯಲ್ಲಿ ಕಳೆಯುತ್ತೇವೆ, ಇದರಲ್ಲಿ ನಾವು ಅನೇಕ ವಿಷಯಗಳಲ್ಲಿ ಶಿಕ್ಷಣವನ್ನು ತೆಗೆದುಕೊಳ್ಳುತ್ತೇವೆ. ನನ್ನ ಶಾಲೆ ಅಥವಾ ನಿಮ್ಮ ಶಾಲೆಯಾಗಿರಲಿ, ಶಾಲೆಯ ಮೂಲ ಗುರಿ ಒಬ್ಬರ ಜೀವನದ ಗುಣಮಟ್ಟವನ್ನು ಸುಧಾರಿಸುವುದು. ಶಿಕ್ಷಣವು ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು. ಯಾವುದೇ ಶಾಲೆಯ ಮೂಲಭೂತ ಕಾರ್ಯವು ಒಂದೇ ಆಗಿದ್ದರೂ, ಅನೇಕ ಅಂಶಗಳು ಒಂದರಿಂದ ಇನ್ನೊಂದನ್ನು ಪ್ರತ್ಯೇಕಿಸುತ್ತದೆ.
ಶಿಕ್ಷಣವು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಭಾಗವಾಗಿದೆ. ಶಾಲೆ ಎಂದರೆ ನಾವು ಶಿಕ್ಷಣ ಪಡೆಯುವ ಸ್ಥಳ. ಇದು ನಮ್ಮ ಉಜ್ವಲ ಭವಿಷ್ಯಕ್ಕಾಗಿ ನಮ್ಮನ್ನು ಸಿದ್ಧಪಡಿಸುತ್ತದೆ. ಇದು ಜೀವನದ ಗುಣಮಟ್ಟಕ್ಕೆ ನೇರವಾಗಿ ಸಂಬಂಧಿಸಿದೆ. ವಾಸ್ತವವಾಗಿ, ಒಬ್ಬ ವ್ಯಕ್ತಿಯ ಭವಿಷ್ಯವನ್ನು ಶಾಲೆಯಲ್ಲಿ ವಿನ್ಯಾಸಗೊಳಿಸಲಾಗಿದೆ.
ವಿಷಯ ವಿಸ್ತಾರಣೆ :
ಶಾಲೆಯು ಮನಸ್ಸುಗಳನ್ನು ರೂಪಿಸುವ ಮತ್ತು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಸ್ಥಳವಾಗಿದೆ. ಮುಂಬರುವ ಪೀಳಿಗೆಗೆ ವ್ಯವಸ್ಥಿತವಾಗಿ ಮತ್ತು ಕ್ರಮಬದ್ಧವಾಗಿ ಶಿಕ್ಷಣವನ್ನು ನೀಡುವ ಸ್ಥಳವಾಗಿದೆ. ಒಂದು ಶಾಲೆಯಲ್ಲಿ ಶಿಕ್ಷಣದ ಕ್ರಮ ಮತ್ತು ವಿಧಾನ ಮತ್ತು ವ್ಯವಸ್ಥೆಯು ರಾಷ್ಟ್ರದ ಭವಿಷ್ಯದಲ್ಲಿ ನಿರ್ಣಾಯಕ ಅಂಶವಾಗಿದೆ.
ನನ್ನ ಶಾಲೆಯು ನನ್ನ ಊರಿನ ಅತ್ಯಂತ ಪ್ರಸಿದ್ಧ ಶಾಲೆಗಳಲ್ಲಿ ಒಂದಾಗಿದೆ. ಇದು ಹಲವಾರು ತರಗತಿ ಕೊಠಡಿಗಳು, ಪ್ರಧಾನ ಕಚೇರಿ, ಸಿಬ್ಬಂದಿ ಕೊಠಡಿ, ಸಭಾಂಗಣ, ಆಟದ ಮೈದಾನ, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಮತ್ತು ದೊಡ್ಡ ಗ್ರಂಥಾಲಯವನ್ನು ಹೊಂದಿರುವ ದೊಡ್ಡ ಕಟ್ಟಡವನ್ನು ಹೊಂದಿದೆ. ನನ್ನ ಶಾಲೆಯ ಕಟ್ಟಡಕ್ಕೆ ಕೆಂಪು ಬಣ್ಣ ಬಳಿಯಲಾಗಿದೆ. ಓದಲು ಪ್ರತಿಷ್ಠಿತ ಶಾಲೆಯನ್ನು ಹೊಂದಲು ನಾನು ತುಂಬಾ ಆಶೀರ್ವದಿಸುತ್ತೇನೆ. ನಮ್ಮ ಶಾಲೆಯು ಅಧ್ಯಯನದ ಜೊತೆಗೆ ನೃತ್ಯ, ಕರಾಟೆ, ಹಾಡುಗಾರಿಕೆ ಮತ್ತು ಚಿತ್ರಕಲೆಯಂತಹ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುತ್ತದೆ. ಇದು ಪ್ರತಿ ವರ್ಷ ಕ್ರೀಡೆಗಳು, ಭಾಷಣಗಳು, ರಸಪ್ರಶ್ನೆಗಳು ಮತ್ತು ಚರ್ಚೆಗಳಂತಹ ಹಲವಾರು ಸ್ಪರ್ಧೆಗಳನ್ನು ನಡೆಸುತ್ತದೆ.
ನಮ್ಮ ಜಗತ್ತಿಗೆ ಅಂತಹ ಮಹಾನ್ ನಿಜವಾದ ಮಾನವನನ್ನು ಸಿದ್ಧಪಡಿಸಿದ ನನ್ನ ಶಾಲೆಯ ಬಗ್ಗೆ ನನಗೆ ಹೆಮ್ಮೆ ಇದೆ. ಸಂಪೂರ್ಣ ಶ್ರೇಯಸ್ಸು ನಮ್ಮ ಶಿಕ್ಷಕರ ಹೆಗಲ ಮೇಲಿದೆ. ವಿದ್ಯಾರ್ಥಿಗಳೊಂದಿಗೆ ಮಾತ್ರವಲ್ಲದೆ ಪೋಷಕರೊಂದಿಗೆ ಮತ್ತು ವಾಸ್ತವವಾಗಿ ಇಡೀ ಸಮುದಾಯದೊಂದಿಗೆ ನಿರಂತರ ಸಂಪರ್ಕದಲ್ಲಿರುವ ಅತ್ಯುತ್ತಮ ಶಾಲೆಯಾಗಿದೆ. ನಮ್ಮ ಶಾಲೆಯಲ್ಲಿ ನಿಯಮಿತವಾಗಿ ಪೋಷಕರ ಶಿಕ್ಷಕರ ಸಭೆಗಳು ನಡೆಯುತ್ತವೆ.
ಶಿಕ್ಷಕರು ವಿದ್ಯಾರ್ಥಿಗಳ ಕೊರತೆ ಮತ್ತು ಸಂಭವನೀಯ ಮಾರ್ಗಗಳ ಬಗ್ಗೆ ಪೋಷಕರಿಗೆ ಮಾರ್ಗದರ್ಶನ ನೀಡುತ್ತಾರೆ. ವಿದ್ಯಾರ್ಥಿಗಳ ನಿಯಮಿತ ಮೌಲ್ಯಮಾಪನ ಮತ್ತು ಫಲಿತಾಂಶಗಳೊಂದಿಗೆ ಪೋಷಕರಿಗೆ ತಿಳಿಸಲಾಗುತ್ತದೆ. ಇದು ಶಾಲೆ ಮತ್ತು ಸಮುದಾಯದ ನಡುವಿನ ಸಂವಹನದ ಕೊರತೆಯ ಅಂತರವನ್ನು ಕಡಿಮೆ ಮಾಡುತ್ತದೆ ಮತ್ತು ಶಿಕ್ಷಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನಮ್ಮ ಶಾಲೆಯು ವಿದ್ಯಾರ್ಥಿಗಳಿಗೆ ಕೆಟ್ಟ ವಿಷಯಗಳನ್ನು ಕಲಿಸುವ ಅದೇ ಹಳೆಯ ಹೆಸರಲ್ಲ ಆದರೆ ಅದಕ್ಕಿಂತ ಹೆಚ್ಚಿನದು.
ಇದು ಶಾಲೆಯ ಒಟ್ಟಾರೆ ಪರಿಸರ, ಅದರ ಆಡಳಿತ, ರೀತಿಯ ಮತ್ತು ಸಮರ್ಪಿತ ಶಿಕ್ಷಕರು ಮತ್ತು ಅವರ ಗುರಿಗಳಿಗೆ ನಿಜವಾದ ಮತ್ತು ಪ್ರಾಮಾಣಿಕ ವಿದ್ಯಾರ್ಥಿಗಳು ಅವಲಂಬಿಸಿರುತ್ತದೆ. ನಿಜವಾದ ಶಾಲೆ ಭೂಮಿಯ ಮೇಲಿನ ಸ್ವರ್ಗದಂತೆ. ಮತ್ತು, ನನ್ನ ಶಿಕ್ಷಕರಿಗೆ, ಈ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೆ, ಯೋಗ್ಯ ಪ್ರಾಂಶುಪಾಲರಿಗೆ ಮತ್ತು ಈ ಶಾಲೆಯ ಪ್ರತಿಯೊಬ್ಬ ಸಿಬ್ಬಂದಿಯನ್ನು ಭೂಮಿಯ ಮೇಲಿನ ಸ್ವರ್ಗವನ್ನಾಗಿ ಮಾಡಲು ನಿಜವಾಗಿಯೂ ಸಮರ್ಪಿತನಾಗಿರುತ್ತೇನೆ.
ಇತರೆ ವಿಷಯಗಳು :
ಕರ್ನಾಟಕದ ಐತಿಹಾಸಿಕ ತಾಣಗಳು
ಕೃಷಿ ಕ್ಷೇತ್ರದ ಸಮಸ್ಯೆಗಳು ಪ್ರಬಂಧ
ಕನಕದಾಸರ ಬಗ್ಗೆ ಭಾಷಣ
ನನ್ನ ಶಾಲಾ ಪ್ರಬಂಧ ಎಂದರೇನು?
ನೀವು ಶಾಲೆಯಲ್ಲಿ ಕಳೆದ ಜೀವನವನ್ನು ನೀವು ಉಲ್ಲೇಖಿಸುವ ಪ್ರಬಂಧವು ನನ್ನ ಶಾಲಾ ಪ್ರಬಂಧವಾಗಿದೆ.
ಸರಳ ಪದಗಳಲ್ಲಿ ಶಾಲೆ ಎಂದರೇನು?
ಶಾಲೆಯು ಸರಳವಾಗಿ ಮೂಲಸೌಕರ್ಯವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಕರಿಂದ ವಿವಿಧ ವಿಷಯಗಳ ಬಗ್ಗೆ ಜ್ಞಾನವನ್ನು ನೀಡುತ್ತಾರೆ.
ಜನರು ಶಾಲೆಗಳನ್ನು ಏಕೆ ಪ್ರೀತಿಸುತ್ತಾರೆ?
ಜನರು ಶಾಲೆಗಳನ್ನು ಪ್ರೀತಿಸುತ್ತಾರೆ ಏಕೆಂದರೆ ಅವರು ಅಲ್ಲಿ ಕಳೆಯುವ ಸಮಯವನ್ನು ಆನಂದಿಸುತ್ತಾರೆ.
kannadastudy24
Leave a reply cancel reply.
Your email address will not be published. Required fields are marked *
Save my name, email, and website in this browser for the next time I comment.
- News / ಸುದ್ದಿಗಳು
- ಸರ್ಕಾರದ ಯೋಜನೆಗಳು
ಕನ್ನಡ ನಾಡು ನುಡಿ ಪ್ರಬಂಧ | Kannada Nadu Essay | Kannada Naadu Nudi Prabandha in Kannada.
ಶೀರ್ಷಿಕೆ: ಕನ್ನಡ ನಾಡು – ಸಂಸ್ಕೃತಿ, ಇತಿಹಾಸ ಮತ್ತು ಪ್ರಗತಿಯ ಚಿತ್ರಣ .
Table of Contents
ಕನ್ನಡ ನಾಡು, ಕನ್ನಡ ಭಾಷೆ ಬೆಳೆಯುವ ನಾಡು, ಭಾರತದ ದಕ್ಷಿಣ ಭಾಗದಲ್ಲಿ ನೆಲೆಸಿರುವ ರೋಮಾಂಚಕ ರಾಜ್ಯವಾಗಿದೆ. ಕರ್ನಾಟಕವು ತನ್ನ ವೈವಿಧ್ಯಮಯ ಭೂದೃಶ್ಯಗಳು, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಆರ್ಥಿಕ ಚೈತನ್ಯವನ್ನು ಹೊಂದಿದ್ದು, ಕನ್ನಡ ನಾಡಿನ ಸಾರವನ್ನು ಒಳಗೊಂಡಿದೆ. ಈ ಪ್ರಬಂಧವು ಕರ್ನಾಟಕದ ಬಹುಮುಖಿ ಅಂಶಗಳನ್ನು ಪರಿಶೋಧಿಸುತ್ತದೆ, ಅದರ ಇತಿಹಾಸ, ಸಂಸ್ಕೃತಿ, ಭೌಗೋಳಿಕತೆ ಮತ್ತು ಆರ್ಥಿಕ ಪ್ರಗತಿಯನ್ನು ಪರಿಶೀಲಿಸುತ್ತದೆ.
ಭೌಗೋಳಿಕ ವೈವಿಧ್ಯ:
ಕನ್ನಡ ನಾಡು ತನ್ನ ಭೌಗೋಳಿಕ ವೈವಿಧ್ಯತೆಯಿಂದ ನಿರೂಪಿಸಲ್ಪಟ್ಟಿದೆ, ಇದು ಪಶ್ಚಿಮ ಘಟ್ಟಗಳು, ಡೆಕ್ಕನ್ ಪ್ರಸ್ಥಭೂಮಿ ಮತ್ತು ಕರಾವಳಿ ಪ್ರದೇಶಗಳನ್ನು ಒಳಗೊಂಡಿದೆ. ರಾಜ್ಯವು ಸೊಂಪಾದ ಕಾಡುಗಳು, ರಮಣೀಯ ಬೆಟ್ಟಗಳು ಮತ್ತು ಫಲವತ್ತಾದ ಬಯಲು ಪ್ರದೇಶಗಳಿಂದ ಆಶೀರ್ವದಿಸಲ್ಪಟ್ಟಿದೆ, ಇದು ಸುಂದರವಾದ ದೃಶ್ಯಾವಳಿಗಳನ್ನು ನೀಡುತ್ತದೆ. ಪಶ್ಚಿಮ ಘಟ್ಟಗಳು, ನಿರ್ದಿಷ್ಟವಾಗಿ, ರಾಜ್ಯದ ಜೀವವೈವಿಧ್ಯಕ್ಕೆ ಕೊಡುಗೆ ನೀಡುತ್ತವೆ ಮತ್ತು ಹಲವಾರು ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿವೆ.
ಐತಿಹಾಸಿಕ ವಸ್ತ್ರ:
ಕನ್ನಡ ನಾಡಿನ ಇತಿಹಾಸವು ರಾಜವಂಶಗಳು, ಸಾಮ್ರಾಜ್ಯಗಳು ಮತ್ತು ಸಾಂಸ್ಕೃತಿಕ ವಿನಿಮಯಗಳ ಕಥೆಗಳೊಂದಿಗೆ ಸಂಕೀರ್ಣವಾಗಿ ಹೆಣೆಯಲ್ಪಟ್ಟಿದೆ. ವಿಜಯನಗರ ಸಾಮ್ರಾಜ್ಯ, ಚಾಲುಕ್ಯರು ಮತ್ತು ಹೊಯ್ಸಳರು ಈ ಪ್ರದೇಶದ ಮೇಲೆ ಅಳಿಸಲಾಗದ ಛಾಪು ಮೂಡಿಸಿದ ಕೆಲವು ಐತಿಹಾಸಿಕ ಶಕ್ತಿಗಳು. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯು ವಿಜಯನಗರ ಅರಸರ ವಾಸ್ತುಶಿಲ್ಪ ಮತ್ತು ಕಲಾ ಕೌಶಲ್ಯಕ್ಕೆ ಸಾಕ್ಷಿಯಾಗಿದೆ.
ಸಾಂಸ್ಕೃತಿಕ ಪರಂಪರೆ:
ಕರ್ನಾಟಕದ ಸಾಂಸ್ಕೃತಿಕ ಪರಂಪರೆಯು ಶಾಸ್ತ್ರೀಯ ಕಲೆಗಳು, ಸಂಗೀತ, ನೃತ್ಯ ಮತ್ತು ಸಾಹಿತ್ಯದ ಸಮೃದ್ಧ ಸಂಯೋಜನೆಯಾಗಿದೆ. ರಾಜ್ಯವು ಭರತನಾಟ್ಯದ ಶಾಸ್ತ್ರೀಯ ನೃತ್ಯ ಪ್ರಕಾರ ಮತ್ತು ಕರ್ನಾಟಕ ಸಂಗೀತದ ಶಾಸ್ತ್ರೀಯ ಸಂಗೀತ ಸಂಪ್ರದಾಯಕ್ಕೆ ತೊಟ್ಟಿಲು. ಮೈಸೂರಿನಲ್ಲಿ ವೈಭವದಿಂದ ಆಚರಿಸಲಾಗುವ ದಸರಾದಂತಹ ಉತ್ಸವಗಳು ಕನ್ನಡ ನಾಡಿನ ಸಾಂಸ್ಕೃತಿಕ ಕಂಪನ್ನು ಪ್ರದರ್ಶಿಸುತ್ತವೆ, ಐತಿಹಾಸಿಕ ಮತ್ತು ಪೌರಾಣಿಕ ವಿಷಯಗಳನ್ನು ಚಿತ್ರಿಸುತ್ತವೆ.
ಕನ್ನಡ ಪಾಕಪದ್ಧತಿ:
ಕನ್ನಡ ನಾಡಿನ ಪಾಕಶಾಲೆಯ ಭೂದೃಶ್ಯವು ಅದರ ಭೌಗೋಳಿಕತೆಯಷ್ಟೇ ವೈವಿಧ್ಯಮಯವಾಗಿದೆ. ರುಚಿಕರವಾದ ಬಿಸಿಬೇಳೆ ಬಾತ್ನಿಂದ ಹಿಡಿದು ಸಿಹಿಯಾದ ಮೈಸೂರು ಪಾಕ್ವರೆಗೆ, ಕರ್ನಾಟಕದ ಪಾಕಪದ್ಧತಿಯು ರುಚಿ ಮೊಗ್ಗುಗಳಿಗೆ ಆಹ್ಲಾದಕರ ಪ್ರಯಾಣವಾಗಿದೆ. ರಾಜ್ಯದ ಪಾಕಶಾಲೆಯ ಕೊಡುಗೆಗಳು ಅದರ ಗ್ಯಾಸ್ಟ್ರೊನೊಮಿಕ್ ಗುರುತನ್ನು ರೂಪಿಸಿದ ಕೃಷಿ ಸಮೃದ್ಧಿ ಮತ್ತು ಸಾಂಸ್ಕೃತಿಕ ಪ್ರಭಾವಗಳನ್ನು ಪ್ರತಿಬಿಂಬಿಸುತ್ತವೆ.
ಆರ್ಥಿಕ ಚೈತನ್ಯ:
ಸಮಕಾಲೀನ ಯುಗದಲ್ಲಿ, ಕನ್ನಡ ನಾಡು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ, ಭಾರತದ GDP ಗೆ ಗಣನೀಯ ಕೊಡುಗೆ ನೀಡಿದೆ. ರಾಜ್ಯ ರಾಜಧಾನಿಯಾಗಿರುವ ಬೆಂಗಳೂರನ್ನು ಐಟಿ ಉದ್ಯಮದಲ್ಲಿ ಅದರ ಪ್ರಾಮುಖ್ಯತೆಯಿಂದಾಗಿ “ಭಾರತದ ಸಿಲಿಕಾನ್ ವ್ಯಾಲಿ” ಎಂದು ಕರೆಯಲಾಗುತ್ತದೆ. ಕರ್ನಾಟಕದ ಆರ್ಥಿಕ ಪ್ರಗತಿ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ; ರಾಜ್ಯವು ಏರೋಸ್ಪೇಸ್, ಜೈವಿಕ ತಂತ್ರಜ್ಞಾನ ಮತ್ತು ಉತ್ಪಾದನಾ ಕೈಗಾರಿಕೆಗಳಿಗೆ ಕೇಂದ್ರವಾಗಿದೆ.
ಸವಾಲುಗಳು ಮತ್ತು ಅವಕಾಶಗಳು:
ಅದರ ಪ್ರಗತಿಯ ಹೊರತಾಗಿಯೂ, ಕನ್ನಡ ನಾಡು ನೀರಿನ ಕೊರತೆ, ನಗರ ದಟ್ಟಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಅಗತ್ಯದಂತಹ ಸವಾಲುಗಳನ್ನು ಎದುರಿಸುತ್ತಿದೆ. ಪರಿಸರ ಸಂರಕ್ಷಣೆಯೊಂದಿಗೆ ಆರ್ಥಿಕ ಬೆಳವಣಿಗೆಯನ್ನು ಸಮತೋಲನಗೊಳಿಸುವುದು ರಾಜ್ಯದ ನೀತಿ ನಿರೂಪಕರ ಪ್ರಮುಖ ಪರಿಗಣನೆಯಾಗಿದೆ. ಹೆಚ್ಚುವರಿಯಾಗಿ, ವಿಶೇಷವಾಗಿ ಜಾಗತೀಕರಣದ ಮುಖಾಂತರ ಸಾಂಸ್ಕೃತಿಕ ಪರಂಪರೆ ಮತ್ತು ಭಾಷಾ ಗುರುತನ್ನು ಸಂರಕ್ಷಿಸುವುದು ನಿರಂತರ ಪ್ರಯತ್ನವಾಗಿ ಉಳಿದಿದೆ.
ಕನ್ನಡ ನಾಡು ವೈರುಧ್ಯಗಳ ನಾಡಾಗಿದ್ದು, ಪ್ರಾಚೀನ ಇತಿಹಾಸವು ಆಧುನಿಕ ಪ್ರಗತಿಯನ್ನು ಸಂಧಿಸುತ್ತದೆ ಮತ್ತು ನೈಸರ್ಗಿಕ ಸೌಂದರ್ಯವು ನಗರ ಚೈತನ್ಯದೊಂದಿಗೆ ಸಹಬಾಳ್ವೆ ನಡೆಸುತ್ತದೆ. ರಾಜ್ಯದ ಪ್ರಯಾಣ, ಅದರ ಐತಿಹಾಸಿಕ ಬೇರುಗಳಿಂದ ಅದರ ಪ್ರಸ್ತುತ ಆರ್ಥಿಕ ಪ್ರಾಮುಖ್ಯತೆಗೆ, ಭವಿಷ್ಯದ ಅವಕಾಶಗಳನ್ನು ಅಳವಡಿಸಿಕೊಳ್ಳುವಾಗ ಅದರ ಪರಂಪರೆಯನ್ನು ಸಂರಕ್ಷಿಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಕರ್ನಾಟಕವು ಮುಂದಕ್ಕೆ ಸಾಗುತ್ತಿರುವಾಗ, ಕನ್ನಡ ನಾಡಿನ ಸ್ಥಿತಿಸ್ಥಾಪಕತ್ವ, ವೈವಿಧ್ಯತೆ ಮತ್ತು ಕ್ರಿಯಾಶೀಲತೆಯನ್ನು ಪ್ರತಿಬಿಂಬಿಸುವ ವಸ್ತ್ರವನ್ನು ಹೆಣೆಯುತ್ತಲೇ ಇದೆ.
sharathkumar30ym
One thought on “ ಕನ್ನಡ ನಾಡು ನುಡಿ ಪ್ರಬಂಧ | kannada nadu essay | kannada naadu nudi prabandha in kannada. ”.
Super thumba chennagide enu hechu visha samgarahisi
Leave a Reply Cancel reply
Your email address will not be published. Required fields are marked *
Save my name, email, and website in this browser for the next time I comment.
- Information
- ಜೀವನ ಚರಿತ್ರೆ
ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಪ್ರಬಂಧ | Prachina Smarakagala Samrakshane Prabandha in Kannada
ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಪ್ರಬಂಧ Prachina Smarakagala Samrakshane Prabandha Conservation of Ancient Monuments Essay in Kannada
ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಪ್ರಬಂಧ
ಹಲೋ ಸ್ನೇಹಿತರೆ ನಾವು ಈ ಲೇಖನದಲ್ಲಿ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಹಳೆಯ ಸ್ಮಾರಕಗಳು ಇತಿಹಾಸವನ್ನು ಪ್ರತಿಬಿಂಬಿಸುತ್ತವೆ ಆದ್ದರಿಂದ ಅವುಗಳನ್ನು ಉಳಿಸಿಕೊಳ್ಳುವುದು ಸರ್ಕಾರ ಮತ್ತು ನಮ್ಮೆಲ್ಲರ ಕರ್ತವ್ಯ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹೇಗೆ ಮಾಡಬೇಕು ಯಾಕೆ ಮಾಡಬೇಕು ಇದೆಲ್ಲದರ ಕುರಿತಾಗಿ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಪೂರ್ಣವಾಗಿ ಓದಿ.
ನಮ್ಮ ದೇಶದ ಪ್ರಾಚೀನ ಸ್ಮಾರಕಗಳನ್ನು ರಕ್ಷಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಪ್ರಾಚೀನ ವಸ್ತುಗಳು ನಮಗೆ ಮಾರ್ಗದರ್ಶನಗಳಾಗಿವೆ ಮತ್ತು ನಮಗೆ ಒಳ್ಳೆಯ ಸಲಹೆ ಸಂದೇಶಗಳನ್ನು ನೀಡುತ್ತವೆ. ಇದಲ್ಲದೆ ಇವು ನಮಗೆ ನಮ್ಮದೇಶಕ್ಕೆ ದೊಡ್ಡ ಆಸ್ತಿಯಾಗಿವೆ, ಅವುಗಳನ್ನು ಸಂರಕ್ಷಿಸಿ ಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಲ್ಲದಿದ್ದರೆ ಒಂದೊಂದಾಗಿ ಎಲ್ಲವನ್ನು ಕಳೆದುಕೊಳ್ಳುತ್ತೆವೆ.
ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುವ ಜನರ ಪಟ್ಟಿಯನ್ನು ಮಾಡಬೇಕು, ಪಟ್ಟಿಯಲ್ಲಿರುವ ಎಲ್ಲಾ ಜನರು ಸಣ್ಣ ಕೊಡುಗೆಗಳನ್ನು ಸೇರಿಸಬೇಕು. ವಿವಿಧ ಸ್ಮಾರಕಗಳ ಸಂರಕ್ಷಣೆ ಮಾಡುವವರ ಗುಂಪನ್ನು ರಚಿಸಬೇಕು. ಕಣ್ಮನ ಮನಸೆಳೆಯುವ ಹಾಗೂ ವಿಸ್ಮಯ ಉಂಟುಮಾಡುವುದು ಸ್ಮಾರಕಗಳ ಉದ್ದೇಶವಾಗಿದೆ.
ಐತಿಹಾಸಿಕ ಸ್ಮಾರಕಗಳು ಹಳೆಯ ವಿಚಾರಗಳು ಹಾಗೂ ರಾಜಕೀಯ ಮಾಹಿತಿಗಳನ್ನು ತಿಳಿಸುವ ಉದ್ದೇಶದಿಂದ ನಿರ್ಮಿಸಲ್ಪಡುತ್ತದೆ, ಅವುಗಳ ನಿರ್ಮಾಣ ಕೂಡ ಕಷ್ಟಕರವಾಗಿರುತ್ತದೆ ಮತ್ತು ಸಾಕಷ್ಟು ಜನರ ಪರಿಶ್ರಮ ಇರುತ್ತದೆ. ಸ್ಮಾರಕಗಳನ್ನು ನಿರ್ಮಿಸಲು ಸುಮಾರು ವರ್ಷಗಳೆ ಬೇಕಾಗುತ್ತದೆ, ಆದ್ದರಿಂದ ಅವು ಹೆಚ್ಚುಕಾಲ ಇರುತ್ತವೆ ಮತ್ತು ಇವು ಹಳೆಯ ನಾಗರಿಕತೆಯನ್ನು ತಿಳಿಯಲು ಸಹಾಯ ಮಾಡುತ್ತವೆ.
ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಎಂದರೇನು.
ಪ್ರಾಚೀನ ಎಂದರೆ ಪುರಾತನ, ಸ್ಮಾರಕಗಳು ಎಂದರೆ ವ್ಯಕ್ತಿ ಅಥವಾ ಘಟನೆಗಳನ್ನು ಸ್ಮರಿಸಲು ಅಥವಾ ನೆನಪಿಸಲು ನಿರ್ಮಿಸಲಾದ ರಚನೆ. ಸಂರಕ್ಷಣೆ ಎಂದರೆ ರಕ್ಷಿಸುವುದು ಅಥವಾ ಸಂರಕ್ಷಿಸುವುದು.
ರಾಜ ಮಹಾರಾಜರ ಕಾಲದ ದೊಡ್ಡ ದೊಡ್ಡ ಕಟ್ಟಡಗಳು, ಯುದ್ದೋಪಕರಣಗಳು , ನಾಣ್ಯಗಳು, ದೇವಾಲಯ, ಮಸೀದಿಗಳು, ಚರ್ಚುಗಳು , ಅರಮನೆ, ಸಾಂಸ್ಕೃತಿಕ ಕೊಡುಗೆ, ಮೂರ್ತಿ ಶಿಲೆಗಳು ಪ್ರಾಚೀನ ಸ್ಮಾರಕಗಳು ಇನ್ನು ಮುಂತಾದವುಗಳನ್ನು ಸ್ಮಾರಕಗಳು ಎಂದು ಕರೆಯಲಾಗುತ್ತದೆ. ಇಂದು ಕೆಲವು ಸ್ಮಾರಕಗಳು ಭೂಗತವಾಗಿದೆ. ಕೆಲವು ಸ್ಮಾರಕಗಳು ತುಂಡು ತುಂಡುಗಳಾಗಿವೆ. ಇಗೀನ ಕಾಲದ ಆರ್ಥಿಕ ಬೆಳವಣಿಗೆಯಿಂದಾಗಿ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಅಂತ್ಯವಾಗುತ್ತಿವೆ.
ವಿಜಯನಗರ ಸಾಮ್ರಾಜ್ಯದ ಬಗ್ಗೆ ತಿಳಿದುಕೊಳ್ಳಲು ಆಧಾರವಾಗಿರುವ ಇತಿಹಾಸದ ಪುಸ್ತಕಗಳು ಇಂದಿಗೂ ಲಭ್ಯವಿದೆ ಮತ್ತು ಅದಕ್ಕೆ ಆಧಾರವಾಗಿರುವ ಪ್ರಾಚೀನ ಸ್ಮಾರಕಗಳು ಇಂದಿಗೂ ಕಾಣಲು ಸಿಗುತ್ತವೆ. ಇಂದಿಗೂ ಹಂಪಿಯಲ್ಲಿ ಹಳೆಯ ಸ್ಮಾರಕಗಳನ್ನು ಕಾಣಬಹುದು. ಬೇಲೂರು – ಹಳೇಬೀಡಿನ ಶಿಲ್ಪಕಲೆ, ವಾಸ್ತು ,ಸುಂದರವಾದ ಮೂರ್ತಿ ಇವೆಲ್ಲವು ಪ್ರಾಚೀನ ಸ್ಮಾರಕಗಳಿಗೆ ಸಾಕ್ಷಿಗಳಾಗಿವೆ. ಪ್ರಪಂಚದ 7 ಅದ್ಭುತಗಳಲ್ಲಿ ತಾಜಮಹಲ್ ಕೂಡ ಒಂದಾಗಿದೆ. ಇದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಹೈದರಾಲಿ, ಟಿಪ್ಪುವಿನ ಸಮಾಧಿ ಹಳೆಯ ಕಾಲದಲ್ಲಿ ಉಪಯೋಗಿಸುತ್ತಿದ್ದ ಯುದ್ದ ಸಾಮಗ್ರಿಗಳು ಬಟ್ಟೆ, ನಣ್ಯ ಇಂದಿಗೂ ಜೀವಂತ ಸಾಕ್ಷಿಗಳಾಗಿವೆ.
ಪ್ರಾಚೀನ ಸ್ಮಾರಕಗಳು ಯಾವುವು:
- ದೆಹಲಿಯ ಕೆಂಪು ಕೋಟೆ
- ಆಗ್ರಾದ ತಾಜ್ ಮಹಲ್
- ಜೈಪುರದ ನಗರ ಅರಮನೆ
- ಕುತುಬ್ ಮಿನಾರ್
- ಹುಮಾಯೂನ್ ಸಮಾಧಿ
- ಫತೇಪುರ್ ಸಿಕ್ರಿ
- ಸಾಂಚಿ ಬೌದ್ಧ
- ಹಂಪಿ ಇತ್ಯಾದಿ
ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಅಗತ್ಯ ಏಕೆ:
ಪ್ರಾಚೀನ ಸ್ಮಾರಕಗಳು ನಮ್ಮ ದೇಶದ ಸಂಪತ್ತು ಮತ್ತು ನಮ್ಮ ನಾಗರಿಕತೆ ಪ್ರತಿಬಿಂಬಿಸುವ ಅಂಶಗಳು. ನಮ್ಮ ಹಿಂದಿನ ಕಾಲದ ಕಲೆ ಮತ್ತು ಚಿಂತನೆ, ಜ್ಞಾನ ಮತ್ತು ನಾಗರಿಕತೆಯ ಬೆಳವಣಿಗೆ ಇವೆಲ್ಲವನ್ನು ಪ್ರಶಂಸಿಸಲು ಸ್ಮಾರಕಗಳ ಸಂರಕ್ಷಣೆ ನಮಗೆ ಸಹಾಯ ಮಾಡುತ್ತವೆ. ಇತಿಹಾಸ ಪುರಾವೆಗಳು ಪ್ರಮುಖ ಮೂಲವಾಗಿ ಕಾರ್ಯನಿರ್ವಹಿಸುತ್ತವೆ. ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಆದ್ದರಿಂದ, ನೈಸರ್ಗಿಕ ಸಂಪತ್ತು, ಹವಾಮಾನ, ಭಯೋತ್ಪಾದಕ ದಾಳಿ, ಬೇಜಾವಾಬ್ದಾರಿಯುತ ನಾಗರಿಕರು, ಸ್ಮಾರಕಗಳ ಪ್ರಾಮುಖ್ಯತೆಯನ್ನು ಗೌರವಿಸದೆ ಇರುವವರು ಸಂದರ್ಶಕರಿಂದ ಸ್ಮಾರಕಗಳನ್ನು ರಕ್ಷಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ.
ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮಾಡುವುದು ಹೇಗೆ:
ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಇದರ ಮಹತ್ವವನ್ನು ಪ್ರತಿಯೊಬ್ಬರಿಗು ತಿಳಿಸಿಕೊಡಬೇಕು, ಪ್ರಾಚೀನ ಅಥವಾ ಐತಿಹಾಸಿಕ ಕೇಂದ್ರಗಳಲ್ಲಿ ಹೆಚ್ಚು ಹೆಚ್ಚು ವಸ್ತುಗಳ ಸಂಗ್ರಹಾಲಯಗಳನ್ನು ನಿರ್ಮಿಸಬೇಕು ಮತ್ತು ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿಸಬೇಕು, ನಿರ್ಮಿಸಲು ಪ್ರೋತ್ಸಾಹ ನೀಡಬೇಕು.
ಐತಿಹಾಸಿಕ ಸ್ಥಳಗಳಲ್ಲಿ ಜನವಸತಿಯನ್ನು ನಿಷೇದಿಸಬೇಕು. ಕೇಂದ್ರಸರ್ಕಾರ ಮತ್ತು ರಾಜ್ಯಸರ್ಕಾರಗಳು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕುರಿತು ಮಾಧ್ಯಮಗಳಲ್ಲಿ ಜಾಯಿರಾತು ನೀಡಬೇಕು. ಈ ರೀತಿ ಕಾರ್ಯಗಳಲ್ಲಿ ಹೆಚ್ಚಿನ ಅಸಕ್ತಿ ವಹಿಸಿ ಅಥವಾ ವಿಷೇಶ ಕಾಳಜಿ ವಹಿಸಿದವ ಅಧಿಕಾರಿಗಳಿಗೆ ಗೌರವ ಮತ್ತು ಪ್ರೋತ್ಸಾಹ ನೀಡಬೇಕು.
ನಾವು ನಮ್ಮ ದೇಶದ ಪ್ರಾಚೀನ ಸ್ಮಾರಕಗಳನ್ನುರಕ್ಷಿಸಬೇಕು.ಪ್ರಾಚೀನ ಸ್ಮಾರಕಗಳು ಒಳ್ಳೆಯ ಸಲಹೆ ಸಂದೇಶಗಳನ್ನು ನಮಗೆ ನೀಡುತ್ತವೆ. ದೇಶದ ಸುಂದರತೆ ಕಾಪಾಡುತ್ತವೆ. ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದರಿಂದ ನಮಗೆ ಲಾಭವೇ ಹೊರತು ನಷ್ಟವಿಲ್ಲ. ಮುಂದಿನ ಪೀಳಿಗೆಗೆ ಪ್ರಾಚೀನ ಸ್ಮಾರಕಗಳ ಬಗ್ಗೆ ತಿಳಿಸಿಕೊಡಲು ಸಂರಕ್ಷಣೆ ಮಾಡಬೇಕು. ಆಧುನಿಕತೆ ಹೆಸರಿನಲ್ಲಿ ಇದೆಲ್ಲದರ ಅವನತಿಯಾಗುತ್ತಿದೆ. ಆದ್ದರಿಂದ ಇವುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ.
1.ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಎಂದರೇನು?
2.ಪ್ರಾಚೀನ ಸ್ಮಾರಕಗಳೆಂದರೆ ಯಾವುವು.
ರಾಜ ಮಹಾರಾಜರ ಕಾಲದ ಕಟ್ಟಡಗಳು, ಯುದ್ದೋಪಕರಣಗಳು , ನಾಣ್ಯಗಳು, ದೇವಾಲಯ, ಮಸೀದಿಗಳು, ಚರ್ಚುಗಳು , ಅರಮನೆ, ಸಾಂಸ್ಕೃತಿಕ ಕೊಡುಗೆ, ಮೂರ್ತಿ ಶಿಲೆಗಳು.
ಇತರೆ ವಿಷಯಗಳು :
ಬೆಂಗಳೂರಿನ ಬಗ್ಗೆ ಪ್ರಬಂಧ
ಪ್ಲಾಸ್ಟಿಕ್ ಮುಕ್ತ ಭಾರತ ಪ್ರಬಂಧ
kannadastudy
Leave a reply cancel reply.
Your email address will not be published. Required fields are marked *
Save my name, email, and website in this browser for the next time I comment.
- information
- Jeevana Charithre
- Entertainment
ಮಳೆ ಬಗ್ಗೆ ಪ್ರಬಂಧ ಕನ್ನಡ | Rain Essay in Kannada
ಮಳೆ ಬಗ್ಗೆ ಪ್ರಬಂಧ ಕನ್ನಡ Essay On Rainy Days In Kannada, rain prabandha in kannada, Rain Essay in Kannada male prabandha
ಮಳೆ ಬಗ್ಗೆ ಪ್ರಬಂಧ
ಬಿಸಿಲಿನ ವಾತಾವರಣದ ನಂತರ ಮಳೆಯು ತಾಜಾ ಮತ್ತು ತಂಗಾಳಿಯ ವಾತಾವರಣವನ್ನು ಒದಗಿಸುವುದರಿಂದ ಭಾರತದಲ್ಲಿ ಮಾನ್ಸೂನ್ಗಳನ್ನು ಸಂತೋಷದಿಂದ ಸ್ವಾಗತಿಸಲಾಗುತ್ತದೆ. ಭೂಮಿಯು ಸಮೃದ್ಧವಾದ ಹಸಿರು ಭೂಮಿಯಾಗಿ ಮಾರ್ಪಡುತ್ತದೆ, ಹೂಬಿಡುವ ಹೂವುಗಳು ನೃತ್ಯ ಮಾಡುತ್ತವೆ ಮತ್ತು ಮಾನ್ಸೂನ್ ಅನ್ನು ಆಚರಿಸುತ್ತವೆ. ಮಳೆಯ ಹಿತವಾದ ವಾಸನೆ ಮತ್ತು ಮಳೆಯ ತಂಪಾಗಿಸುವ ತುಂತುರು ನಮಗೆ ತುಂಬಾ ತಾಜಾತನವನ್ನು ನೀಡುತ್ತದೆ.
ಮಳೆಯ ದಿನದಲ್ಲಿ ಪ್ರಕೃತಿಯು ಎಷ್ಟು ಲಯಬದ್ಧ ಮತ್ತು ಹಿತವಾಗಿರುತ್ತದೆ. ಗಾಢ ಮೋಡಗಳು ಆಕಾಶದಲ್ಲಿ ಮೆರವಣಿಗೆ ಮತ್ತು ಮಳೆಯ ಹನಿಗಳನ್ನು ಸುರಿಸುತ್ತವೆ, ಮರಗಳು ಮೋಹಕ ಆನಂದದಿಂದ ತೊಳೆದಿವೆ ಮತ್ತು ನೃತ್ಯ ಮಾಡುತ್ತವೆ, ಕತ್ತಲೆ ಮತ್ತು ಕತ್ತಲೆಯಾದ ದಿನವು ನಮ್ಮ ಹೃದಯವನ್ನು ಮಿನುಗುತ್ತಿದೆ, ಕಪ್ಪೆಗಳು ಅಲ್ಲಿ ಇಲ್ಲಿ ಪುಟಿದೇಳುತ್ತವೆ, ಕೆಸರಿನ ನೀರಿನ ಕೊಳಗಳಲ್ಲಿ ಸಂತೋಷದಿಂದ ಜಿಗಿಯುವ ಮಕ್ಕಳು, ಗರಿಗಳನ್ನು ಹರಡುವ ಸುಂದರವಾದ ನವಿಲುಗಳು ಮತ್ತು ತಮ್ಮ ಸಂಗಾತಿಗಳನ್ನು ಆಕರ್ಷಿಸುವ ಕಲೆಯನ್ನು ಸಂಯೋಜಿಸಲು ನೃತ್ಯ ಮಾಡುವುದು, ರೈತರು ಹರ್ಷಚಿತ್ತದಿಂದ ಮತ್ತು ಹೊಸ ಭರವಸೆಗಳು ಅವರ ಕಣ್ಣುಗಳನ್ನು ಹೊಳೆಯುವಂತೆ ಮಾಡುತ್ತವೆ – ಎಲ್ಲರೂ ಮಳೆಯ ಸಂತೋಷವನ್ನು ಆಚರಿಸಲು ಭಾಗವಹಿಸುತ್ತಾರೆ.
ಮಳೆಯು ಹವಾಮಾನವನ್ನು ಉರಿಯುತ್ತಿರುವ ಬಿಸಿ ಮತ್ತು ಶುಷ್ಕದಿಂದ ರಿಫ್ರೆಶ್ ಆಗಿ ಪರಿವರ್ತಿಸುತ್ತದೆ. ಸಸ್ಯಗಳು, ಪಕ್ಷಿಗಳು ಮತ್ತು ಮನುಷ್ಯರು, ಎಲ್ಲರೂ ಮಳೆಯ ಸಂಭ್ರಮದಲ್ಲಿ ಭಾಗವಹಿಸುತ್ತಾರೆ. ಮರಗಳು ಹಸಿರಾಗುತ್ತವೆ, ನವಿಲುಗಳು ನೃತ್ಯ ಮಾಡಲು ಪ್ರಾರಂಭಿಸುತ್ತವೆ, ರೈತರು ಹರ್ಷಚಿತ್ತದಿಂದ ತಿರುಗುತ್ತಾರೆ ಮತ್ತು ನಾವೆಲ್ಲರೂ ಭೂಮಿಯ ಮೇಲಿನ ಮಳೆಯ ಪಾರ್ಟಿಯನ್ನು ಆನಂದಿಸುತ್ತೇವೆ.
ಮಳೆ ನಮ್ಮ ಜೀವನದ ಬಹುಮುಖ್ಯ ಭಾಗ. ಇದು ನಮ್ಮೆಲ್ಲರಿಗೂ ನೀರಿನ ಪ್ರಾಥಮಿಕ ಮೂಲವಾಗಿದೆ. ಇದು ನೀರಿನ ಚಕ್ರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಎಲ್ಲರಿಗೂ ಶುದ್ಧ ನೀರನ್ನು ಒದಗಿಸುತ್ತದೆ. ಆದರೆ, ಮಳೆ ನಮಗೆ ನೀರು ಮಾತ್ರ ನೀಡುತ್ತಿಲ್ಲ. ಇದು ನಮ್ಮ ಮೇಲೆ ತುಂಬಾ ಶಾಂತಗೊಳಿಸುವ ಮತ್ತು ಉಲ್ಲಾಸಕರ ಪರಿಣಾಮವನ್ನು ಬೀರುತ್ತದೆ. ಮಳೆಹನಿಗಳ ಶಬ್ದವು ತುಂಬಾ ವಿಶ್ರಾಂತಿ ನೀಡುತ್ತದೆ ಮತ್ತು ಮಳೆಯ ವಾಸನೆಯು ತುಂಬಾ ಆಹ್ಲಾದಕರವಾಗಿರುತ್ತದೆ.
ಮಳೆಯು ತುಂಬಾ ಸುಂದರವಾಗಿರುತ್ತದೆ, ವಿಶೇಷವಾಗಿ ಮಳೆಬಿಲ್ಲಿನೊಂದಿಗೆ ಸಂಯೋಜಿಸಿದಾಗ. ಮಳೆಹನಿಗಳ ಮೂಲಕ ಸೂರ್ಯನ ಬೆಳಕು ಹರಿದು ಅವುಗಳಿಂದ ಪ್ರತಿಫಲಿಸಿದಾಗ ಮಳೆಬಿಲ್ಲುಗಳು ಸೃಷ್ಟಿಯಾಗುತ್ತವೆ. ಅವು ಪ್ರಕೃತಿಯ ಅತ್ಯಂತ ಸುಂದರವಾದ ವಸ್ತುಗಳಲ್ಲಿ ಒಂದಾಗಿದೆ. ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಮಳೆಯು ಸ್ವಲ್ಪ ಅಪಾಯಕಾರಿಯಾಗಿದೆ. ಗುಡುಗು, ಮಿಂಚುಗಳಿದ್ದರೆ ಒಳಗಡೆಯೇ ಇರುವುದು ಉತ್ತಮ
ಮಳೆಯ ಸಮಯದಲ್ಲಿ ಭಾವನೆಗಳು :
ಮಳೆ ಬಂದಾಗ, ಅನೇಕ ಜನರು ತುಂಬಾ ನಿರಾಳರಾಗುತ್ತಾರೆ. ಮಳೆಯ ಶಬ್ದವು ತುಂಬಾ ಶಾಂತವಾಗಿದೆ ಮತ್ತು ದೀರ್ಘ ದಿನದ ನಂತರ ವಿಶ್ರಾಂತಿ ಪಡೆಯಲು ಇದು ಉತ್ತಮ ಮಾರ್ಗವಾಗಿದೆ. ಮಳೆಯ ವಾಸನೆಯು ತುಂಬಾ ಆಹ್ಲಾದಕರವಾಗಿರುತ್ತದೆ ಮತ್ತು ಬಿಸಿಯಾದ ದಿನದಲ್ಲಿ ಇದು ಉಲ್ಲಾಸಕರವಾಗಿರುತ್ತದೆ.
ಮಳೆಯೂ ನೋಡಲು ಸುಂದರವಾಗಿರುತ್ತದೆ. ಮಳೆಯಾದಾಗ, ಆಕಾಶವು ಹೆಚ್ಚಾಗಿ ಗಾಢವಾಗಿರುತ್ತದೆ ಮತ್ತು ಮಳೆಹನಿಗಳು ತುಂಬಾ ವರ್ಣಮಯವಾಗಿರಬಹುದು. ಮಳೆಬಿಲ್ಲು ಮಳೆಯ ನಂತರ ಹೆಚ್ಚಾಗಿ ಗೋಚರಿಸುತ್ತದೆ ಮತ್ತು ಇದು ಪ್ರಕೃತಿಯಲ್ಲಿ ಅತ್ಯಂತ ಸುಂದರವಾದ ವಸ್ತುಗಳಲ್ಲಿ ಒಂದಾಗಿದೆ.
ನೀವು ಹೊರಗೆ ಹೋಗಬಹುದು ಮತ್ತು ಹವಾಮಾನವನ್ನು ಆನಂದಿಸಬಹುದು. ನೀವು ಮಳೆಯಲ್ಲಿ ನಡೆಯಬಹುದು, ಅಥವಾ ನೀವು ಹೊರಗೆ ಕುಳಿತು ಮಳೆಯ ಶಬ್ದ ಮತ್ತು ವಾಸನೆಯನ್ನು ಆನಂದಿಸಬಹುದು.
ಇದು ಮಳೆಯ ದಿನದ ದೊಡ್ಡ ಪ್ರಯೋಜನಗಳಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ ಮಾನ್ಸೂನ್ ಅಲ್ಲದ ತಿಂಗಳುಗಳಲ್ಲಿ ಸಂಭವಿಸುವುದರಿಂದ, ಇದು ಸೂರ್ಯನ ಶಾಖದಿಂದ ಪರಿಹಾರವನ್ನು ತರುತ್ತದೆ. ಗಾಳಿಯು ತಂಪಾಗುತ್ತದೆ ಮತ್ತು ತಂಪಾದ ಗಾಳಿಯು ಎಲ್ಲೆಡೆ ಅನುಭವಿಸಬಹುದು. ದೀರ್ಘ ಮತ್ತು ನಿರಂತರ ಬಿಸಿಲಿನ ದಿನಗಳ ನಂತರ, ತಂಪಾದ ಗಾಳಿಯ ಅನುಭವವು ಕೇವಲ ಸ್ವರ್ಗೀಯವಾಗಿದೆ ಮತ್ತು ನೀವು ಹಾದುಹೋಗಲು ಇಷ್ಟಪಡದ ಕ್ಷಣವಾಗಿದೆ.
ಗುಡುಗು ಮತ್ತು ಮಿಂಚು ಇರುವ ಪ್ರದೇಶದಲ್ಲಿ ನೀವು ವಾಸಿಸುತ್ತಿದ್ದರೆ, ಚಂಡಮಾರುತದ ಸಮಯದಲ್ಲಿ ಒಳಗೆ ಉಳಿಯುವುದು ಉತ್ತಮ. ನೀವು ಹೊರಗೆ ಹೋಗಬೇಕಾದರೆ, ಎತ್ತರದ ಮರಗಳು ಅಥವಾ ಲೋಹದ ವಸ್ತುಗಳನ್ನು ತಪ್ಪಿಸಲು ಮರೆಯದಿರಿ.
ಮಳೆಗಾಲದ ದಿನ ಎಲ್ಲರಿಗೂ ಇಷ್ಟವಾಗುತ್ತದೆ. ಅದನ್ನು ಧಿಕ್ಕರಿಸುವವರು ಅಷ್ಟೇನೂ ಇರುತ್ತಿರಲಿಲ್ಲ. ಪ್ರತಿಯೊಬ್ಬರೂ ಮಳೆಯನ್ನು ಆನಂದಿಸಲು ತಮ್ಮದೇ ಆದ ಮಾರ್ಗವನ್ನು ಹೊಂದಿದ್ದಾರೆ. ಕೆಲವರು ಮಳೆಯಲ್ಲಿ ನಡೆಯಲು ಇಷ್ಟಪಡುತ್ತಾರೆ, ಇತರರು ಮುಳುಗಲು ಮತ್ತು ನೃತ್ಯ ಮಾಡಲು ಇಷ್ಟಪಡುತ್ತಾರೆ, ಇತರರು ತಮ್ಮ ಕಿಟಕಿಯ ಮೇಲೆ ಕುಳಿತಿರುವ ನೋಟವನ್ನು ಇಷ್ಟಪಡುತ್ತಾರೆ.
ಮಳೆಯ ದಿನದ ಪ್ರಯೋಜನಗಳು
- ಒಂದು ದಿನದ ಮಳೆಯು ಹೊಸ ಸಸ್ಯಗಳು ಮತ್ತು ಸಸ್ಯಗಳನ್ನು ಬೆಳೆಯಲು ಸಹಾಯ ಮಾಡುತ್ತದೆ.
- ಭೂಮಿಯ ಮೇಲ್ಮೈ ಮತ್ತು ಗಾಳಿಯಿಂದ ಧೂಳು ಮತ್ತು ಕೊಳೆಯನ್ನು ತೊಳೆಯುವ ಮೂಲಕ ನೈಸರ್ಗಿಕ ಶುದ್ಧೀಕರಣ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
- ಶಾಖದಿಂದ ಪರಿಹಾರವನ್ನು ನೀಡುತ್ತದೆ ಮತ್ತು ಹವಾಮಾನವನ್ನು ಹೆಚ್ಚು ಆಹ್ಲಾದಕರಗೊಳಿಸುತ್ತದೆ.
- ಬಿಸಿಲಿನ ಬೇಗೆಗಿಂತ ಮಳೆಯ ದಿನದಲ್ಲಿ ಕೆಲಸ ಮಾಡುವುದು ಹೆಚ್ಚು ಸುಲಭ ಮತ್ತು ಆನಂದದಾಯಕವಾಗುತ್ತದೆ.
ಮಳೆಗಾಲದಲ್ಲಿ ರೈತರು ತಮ್ಮ ಹೊಲಗಳಿಗೆ ನೀರು ಹಾಕುವುದರಿಂದ ಬೆಳೆಗಳಿಗೆ ಅನುಕೂಲವಾಗುತ್ತದೆ. ಅನೇಕ ಬೆಳೆಗಳಿಗೆ ಮಣ್ಣಿನಿಂದ ಉಳಿಸಿಕೊಳ್ಳಲು ನಿರ್ದಿಷ್ಟ ಪ್ರಮಾಣದ ನೀರು ಬೇಕಾಗುತ್ತದೆ,
- ಮಳೆಯಿಲ್ಲದೆ, ಸುರಂಗಗಳು ಅಥವಾ ಜಲಮಾರ್ಗಗಳನ್ನು ಬಳಸಿಕೊಂಡು ಹೊಲಕ್ಕೆ ಕೃತಕವಾಗಿ ನೀರನ್ನು ತೆಗೆದುಕೊಳ್ಳಬೇಕಾಗುತ್ತದೆ
- ನಿಸರ್ಗ ಪ್ರೇಮಿಗಳಿಗೂ ಮಳೆಯ ದಿನ ಬಹು ನಿರೀಕ್ಷಿತ ಘಟನೆಯಾಗಿದೆ. ಬಿಸಿಲಿನ ತಾಪಕ್ಕೆ ಸಿಲುಕಿ ಸತ್ತು ಬಿದ್ದಿದ್ದ ಭೂಮಿ ಥಟ್ಟನೆ ಮರುಜೀವ ಪಡೆದು ತನ್ನ ಸುಪ್ತ ಸೌಂದರ್ಯವನ್ನುಸಾರುತ್ತದೆ.
- ಮುದುಕರು, ವಯೋವೃದ್ಧರು ಕೂಡ ಮಳೆಯನ್ನು ಇಷ್ಟಪಡುತ್ತಾರೆ ಮತ್ತು ಅದನ್ನು ಆನಂದಿಸುತ್ತಿದ್ದಾರೆ.
- ಕುಟುಂಬ ಸದಸ್ಯರು ಮತ್ತು ಮಕ್ಕಳೊಂದಿಗೆ ಆನಂದಿಸಲು ಇದು ವಿಶ್ರಾಂತಿ ಕ್ಷಣವಾಗಿದೆ
- ಮಳೆನೀರು ಕೊಯ್ಲು ಮೂಲಕ ನೀರನ್ನು ಸಂರಕ್ಷಿಸಲು ಇದು ಅವಕಾಶವನ್ನು ಒದಗಿಸುತ್ತದೆ.
ಮಳೆಯ ದಿನದ ಪರಿಣಾಮಗಳು :
- ನಗರ ವಸಾಹತುಗಳಲ್ಲಿ ಕಂಡುಬರುವ ಮಳೆಯ ದಿನದ ಪರಿಣಾಮಗಳು ಹಳ್ಳಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿವೆ.
- ಕಚೇರಿಗೆ ಹೋಗುವವರು ಮತ್ತು ಅಂಗಡಿಯವರು ಮಳೆಗಾಲದ ದಿನವನ್ನು ಸ್ವಾಗತಿಸುವುದಿಲ್ಲ, ಏಕೆಂದರೆ ಇದು ಅವರಿಗೆ ದೀರ್ಘ ವಿಳಂಬ ಅಥವಾ ನಷ್ಟವನ್ನು ಸೂಚಿಸುತ್ತದೆ
- ಕಳಪೆ ಮೂಲಸೌಕರ್ಯ ಯೋಜನೆ ಹೊಂದಿರುವ ನಗರಗಳು ನೀರಿನ ಅಡಚಣೆಯನ್ನು ಎದುರಿಸಬಹುದು
- ಮಳೆಯ ಅಡಚಣೆ ಮತ್ತು ಟ್ರಾಫಿಕ್ ಜಾಮ್ನಿಂದ ಅಗತ್ಯ ತುರ್ತು ಸೇವೆಗಳು ವಿಳಂಬವಾಗುತ್ತವೆ.
ಮಳೆಯ ದಿನವು ಎಲ್ಲರಿಗೂ ಇಷ್ಟವಾಗುವುದು ಮಾತ್ರವಲ್ಲದೆ ಪ್ರಕೃತಿ, ಸಸ್ಯವರ್ಗ ಮತ್ತು ಜನರಿಗೆ ಸಹ ಪ್ರಯೋಜನಕಾರಿಯಾಗಿದೆ. ಒಂದೇ ಒಂದು ದಿನ ಮಳೆ ಬಂದರೂ ಅವರೆಲ್ಲ ಮಳೆಯನ್ನು ಸ್ವಾಗತಿಸುವಂತಿದೆ. ಮಳೆಯ ದಿನವನ್ನು ಆನಂದಿಸಲು ಉತ್ತಮ ಮಾರ್ಗವೆಂದರೆ ಪ್ರಕೃತಿಯ ಸೌಂದರ್ಯವನ್ನು ಮೆಚ್ಚುವುದು.
ಮಳೆಯು ಭೂಮಿಯ ಮೇಲಿನ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಮಳೆಯು ಅಪಾಯಕಾರಿ ಅಥವಾ ಸುಂದರವಾಗಿರುತ್ತದೆ. ಯಾವುದೇ ಸಂದರ್ಭದಲ್ಲಿ, ಮಳೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.
ಇದು ನನ್ನ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದಾಗಿದೆ. ಮಳೆಯ ದಿನಗಳು ಪ್ರತಿಯೊಬ್ಬರ ಜೀವನದಲ್ಲಿ ನಿಜವಾಗಿಯೂ ಸಂತೋಷ ಮತ್ತು ಸಂತೋಷವನ್ನು ತರುತ್ತವೆ.
ಮಳೆಗಾಲ ಎಂದರೆ ಮಕ್ಕಳಿಂದ ಹಿಡಿದು ಸಮಾಜದ ಎಲ್ಲ ವರ್ಗದ ಹಿರಿಯರಿಗೂ ಪ್ರೀತಿ. ಇದು ಹಲವಾರು ಕಡೆಗಳಲ್ಲಿ ಸ್ವಲ್ಪ ಅಸ್ವಸ್ಥತೆಯನ್ನು ಉಂಟುಮಾಡಿದರೂ, ಜನರು ಇನ್ನೂ ಮಳೆಯ ದಿನವನ್ನು ತೋರುತ್ತಿದ್ದಾರೆ.
ಇತರೆ ವಿಷಯಗಳು
ಅತಿವೃಷ್ಟಿ ಅನಾವೃಷ್ಟಿ ಪ್ರಬಂಧ
ಮಣ್ಣಿನ ಬಗ್ಗೆ ಪ್ರಬಂಧ
ಜಲ ಸಂರಕ್ಷಣೆ ಪ್ರಬಂಧ
ಅರಣ್ಯ ಸಂರಕ್ಷಣೆ ಪ್ರಬಂಧ
ಪರಿಸರ ಮಹತ್ವ ಪ್ರಬಂಧ
ಮಳೆಯ 2 ಭಾವನೆಗಳು ತಿಳಿಸಿ
ತುoಬಾ ತಾಜತನವಾಗಿರುತ್ತದೆ. ಮಳೆಯು ಸುoದರವಾಗಿದೆ
ಮಳೆಯ 2 ತಿಳಿಸಿ ಪ್ರಯೋಜನಗಳು
Leave a reply cancel reply.
Save my name, email, and website in this browser for the next time I comment.
EDITOR PICKS
Irumudi kattu sabarimalaikku lyrics in kannada | ಇರುಮುಡಿ ಕಟ್ಟು ಶಬರಿಮಲೈಕ್ಕಿ ಸಾಂಗ್ ಲಿರಿಕ್ಸ್, atma rama ananda ramana lyrics in kannada | ಆತ್ಮಾರಾಮ ಆನಂದ ರಮಣ ಸಾಂಗ್ ಲಿರಿಕ್ಸ್ ಕನ್ನಡ, ಮಹಾತ್ಮ ಗಾಂಧೀಜಿ ಪ್ರಬಂಧ ಕನ್ನಡ | mahatma gandhi essay in kannada, popular posts, popular category.
- information 267
- Prabandha 227
- Kannada Lyrics 122
- Lyrics in Kannada 57
- Jeevana Charithre 41
- Festival 36
- Kannada News 32
© KannadaNew.com
- Privacy Policy
- Terms and Conditions
- Dmca Policy
Kannada Prabandha
ಮಕ್ಕಳ ದಿನಾಚರಣೆಯ ಬಗ್ಗೆ ಪ್ರಬಂಧ । children’s day essay in kannada.
Children’s Day essay in Kannada :ಮಕ್ಕಳ ದಿನವನ್ನು ವಾರ್ಷಿಕವಾಗಿ ನವೆಂಬರ್ 14 ರಂದು ಆಚರಿಸಲಾಗುತ್ತದೆ, ಇದು ಮಕ್ಕಳ ಮುಗ್ಧತೆ, ಸೃಜನಶೀಲತೆ ಮತ್ತು ಮಿತಿಯಿಲ್ಲದ ಸಾಮರ್ಥ್ಯವನ್ನು ಗೌರವಿಸಲು ಮತ್ತು …
ದೀಪಾವಳಿ ಹಬ್ಬದ ಬಗ್ಗೆ ಪ್ರಬಂಧ । Essay on Deepavali festival in Kannada
Essay on Deepavali festival in Kannada :ದೀಪಾವಳಿ ಯು ರೋಮಾಂಚಕ ಮತ್ತು ಆಧ್ಯಾತ್ಮಿಕವಾಗಿ ಮಹತ್ವದ ಹಬ್ಬವಾಗಿದ್ದು, ಪ್ರಪಂಚದಾದ್ಯಂತ ಲಕ್ಷಾಂತರ ಜನರು ಆಚರಿಸುತ್ತಾರೆ, ಭಾರತವು ಅದರ ಕೇಂದ್ರಬಿಂದುವಾಗಿದೆ. ಈ …
ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಹಾಗೂ ಅದರ ಕಾರ್ಯ ನಿರ್ವಹಣೆ ಬಗ್ಗೆ ಪ್ರಬಂಧ
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಭೂಮಿಯ ಸುತ್ತ ಪರಿಭ್ರಮಿಸುವ ಬಹುರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯವಾಗಿದ್ದು, ವೈಜ್ಞಾನಿಕ ಸಂಶೋಧನೆ, ಅಂತರಾಷ್ಟ್ರೀಯ ಸಹಕಾರ ಮತ್ತು ತಾಂತ್ರಿಕ ಆವಿಷ್ಕಾರಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಈ ಗಮನಾರ್ಹ …
ಡಾ ಬಿ.ಆರ್ ಅಂಬೇಡ್ಕರ್ ಜೀವನದ ಬಗ್ಗೆ ಪ್ರಬಂಧ | Dr BR Ambedkar Essay in Kannada
Dr BR Ambedkar Essay in Kannada :ಬಾಬಾಸಾಹೇಬ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಡಾ. ಭೀಮರಾವ್ ರಾಮ್ಜಿ ಅಂಬೇಡ್ಕರ್ ಅವರು ದೂರದೃಷ್ಟಿಯ ನಾಯಕ ಮತ್ತು ಬೌದ್ಧಿಕ ದೈತ್ಯರಾಗಿದ್ದರು, ಅವರ …
ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಪ್ರಬಂಧ | Sardar Vallabhbhai Patel Essay 600 words
Sardar Vallabhbhai Patel Essay : “ಭಾರತದ ಉಕ್ಕಿನ ಮನುಷ್ಯ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದರು ಮತ್ತು …
ರಸ್ತೆ ಸುರಕ್ಷತೆಯ ಬಗ್ಗೆ ಪ್ರಬಂಧ | Road Safety Essay in Kannada
Road Safety Essay in Kannada :ಭಾರತದಲ್ಲಿ ರಸ್ತೆ ಸುರಕ್ಷತೆಯು ಒಂದು ನಿರ್ಣಾಯಕ ವಿಷಯವಾಗಿದೆ, ಅದರ ವ್ಯಾಪಕವಾದ ರಸ್ತೆ ಜಾಲ ಮತ್ತು ಬೀದಿಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯನ್ನು ನೀಡಲಾಗಿದೆ. …
ಶಿಕ್ಷಣದ ಮಹತ್ವದ ಕುರಿತು ಪ್ರಬಂಧ | Essay on Importance of Education
Essay on Importance of Education :ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ರಚನೆಯಲ್ಲಿ ಶಿಕ್ಷಣವು ಯಾವಾಗಲೂ ಪ್ರಮುಖ ಪಾತ್ರವನ್ನು ವಹಿಸಿದೆ. ಜ್ಞಾನ ಮತ್ತು ಕಲಿಕೆಯ ಶ್ರೀಮಂತ ಇತಿಹಾಸದೊಂದಿಗೆ, …
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಬಗ್ಗೆ ಪ್ರಬಂಧ | Dr Sarvepalli Radhakrishnan Essay in Kannada
Dr Sarvepalli Radhakrishnan Essay in Kannada :ಭಾರತದ ಅತ್ಯಂತ ಗೌರವಾನ್ವಿತ ವಿದ್ವಾಂಸರು ಮತ್ತು ದಾರ್ಶನಿಕರಲ್ಲಿ ಒಬ್ಬರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತತ್ವಶಾಸ್ತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ …
- kannadadeevige.in
- Privacy Policy
- Terms and Conditions
- DMCA POLICY
Sign up for Newsletter
Signup for our newsletter to get notified about sales and new products. Add any text here or remove it.
- 8th Standard
- ವಿರುದ್ಧಾರ್ಥಕ ಶಬ್ದಗಳು
- ಕನ್ನಡ ವ್ಯಾಕರಣ
- ದೇಶ್ಯ-ಅನ್ಯದೇಶ್ಯಗಳು
- ಕನ್ನಡ ನಿಘಂಟು
- ಭೂಗೋಳ-ಸಾಮಾನ್ಯಜ್ಞಾನ
- ಭಾರತದ ಇತಿಹಾಸ-ಸಾಮಾನ್ಯ ಜ್ಞಾನ
- ಕನ್ನಡ ಕವಿ, ಕಾವ್ಯನಾಮಗಳು
- Information
- Life Quotes
- Education Loan
Kannada Notes
9th standard kannada nadu nudi poem notes | ಕನ್ನಡ ನಾಡು ನುಡಿ ಪದ್ಯದ ಪ್ರಶ್ನೋತ್ತರ ನೋಟ್ಸ್.
9ನೇ ತರಗತಿ ಕನ್ನಡ ನಾಡು ನುಡಿ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 9th Standard Kannada Nadu Nudi Poem Notes Question Answer Mcq Pdf Download in Kannada Medium Karnataka State Syllabus 2023, Kseeb Solutions for Class 9 Kannada Poem 8 Notes Kannada Nadu Nudi Poem Summary in Kannada Kannada Nadu Nudi 9th Standard Poem Notes 9th Class Kannada 8th Poem Notes 9th Class Kannada Naadu Nudi Question Answer Kannada Naadu Nudi Notes Class 9
ಪದ್ಯ ಭಾಗ – 8
ಪದ್ಯದ ಹೆಸರು : ಕನ್ನಡ ನಾಡು ನುಡಿ
ಕೃತಿಕಾರರ ಪರಿಚಯ :
ಶ್ರೀವಿಜಯ
ಶ್ರೀವಿಜಯನು ಕ್ರಿ.ಶ. ಸುಮಾರು 9 ನೆಯ ಶತಮಾನದಲ್ಲಿ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನ ಆಸ್ಥಾನದಲ್ಲಿ ಇದ್ದನು . ಈತನು ‘ ಕವಿರಾಜಮಾರ್ಗ ‘ ಎಂಬ ಲಾಕ್ಷಣಿಕ ಗ್ರಂಥವನ್ನು ರಚಿಸಿದ್ದಾನೆ .
ನಯಸೇನ :
ನಯಸೇನನು ಕ್ರಿ.ಶ. ಸುಮಾರು 12 ನೆಯ ಶತಮಾನದಲ್ಲಿ ಧಾರವಾಡ ಜಿಲ್ಲೆಯ ಮುಳುಗುಂದದಲ್ಲಿ ಜೀವಿಸಿದ್ದನು .
ಈತನು ‘ ಧರ್ಮಾಮೃತ ‘ ಎಂಬ ಚಂಪೂ ಕಾವ್ಯ ಕೃತಿಯನ್ನು ರಚಿಸಿದ್ದಾನೆ . ಕನ್ನಡದಲ್ಲಿ ಕಾವ್ಯ ರಚನೆಯ ಸಮಯದಲ್ಲಿ ಸಂಸ್ಕೃತ ಶಬ್ದಗಳನ್ನು ಸೇರಿಸುವ ಬಗ್ಗೆ ನಯಸೇನನು ಆಕ್ಷೇಪವನ್ನು ವ್ಯಕ್ತಪಡಿಸುತ್ತಾನೆ .
ಕಾವ್ಯ ರಚಿಸುವುದಾದರೆ ಕನ್ನಡದಲ್ಲಿ ರಚಿಸಬೇಕು ಇಲ್ಲವೇ ಸಂಸ್ಕೃತದಲ್ಲಿ ರಚಿಸಬೇಕು . ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ – ತುಪ್ಪಗಳ ಮಿಶ್ರಣದಂತೆ ಅಸ್ವಾದ ಆಗುತ್ತದೆ ಎಂಬುದು ಆತನ ಅಭಿಪ್ರಾಯ .
ನೇಮಿಚಂದ್ರ :
ನೇಮಿಚಂದ್ರನು ಕ್ರಿ.ಶ. ಸುಮಾರು 12 ನೆಯ ಶತಮಾನದಲ್ಲಿ ಜೀವಿಸಿದ್ದನು ಈತನು ಲೀಲಾವತೀ ಪ್ರಬಂಧ ಹಾಗೂ ಅರ್ಧನೇಮಿ ಪುರಾಣ ಎಂಬ ಪ್ರಸಿದ್ಧ ಕಾವ್ಯಗಳನ್ನು ರಚಿಸಿದ್ದಾನೆ . ಈತನು ಕವಿಗಳ ಕಾವ್ಯಶಕ್ತಿಯ ಹೆಗ್ಗಳಿಕೆಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ .
ಮಹಲಿಂಗರಂಗ :
ಮಹಲಿಂಗರಂಗನು ಕ್ರಿ.ಶ. ಸುಮಾರು 17 ನೆಯ ಶತಮಾನದಲ್ಲಿ ಜೀವಿಸಿದ್ದನು . ಈತನು ‘ ಅನುಭವಾಮೃತ ‘ ಎಂಬ ಕೃತಿಯನ್ನು ರಚಿಸಿದ್ದಾನೆ . ಇವನ ನಿಜನಾಮ ಶ್ರೀರಂಗ , ತನ್ನ ಹೆಸರಿನೊಂದಿಗೆ ತಂದೆಯ ಹೆಸರನ್ನು ಸೇರಿಸಿ ಮಹಲಿಂಗರಂಗ ಎಂದು ಕರೆದುಕೊಂಡಿದ್ದಾನೆ .
ಈತನ ಆರಾಧ್ಯ ದೈವ ಶ್ರೀಶೈಲ ಮಲ್ಲಿಕಾರ್ಜುನ , ಅನುಭವಾಮೃತವು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕೃತಿಯೆಂಬುದು ಇನ್ನೊಂದು ವಿಶೇಷ .
ಆಂಡಯ್ಯನು ಕ್ರಿಶ ಸುಮಾರು 13 ನೇ ಶತಮಾನದಲ್ಲಿ ಕದಂಬರ ದೊರೆ ಕಾಮದೇವನ ಆಶ್ರಯದಲ್ಲಿ ಇದ್ದನು . ಇವನು ‘ ಕಬ್ಬಿಗರ ಕಾವ ‘ ಅಥವಾ ‘ ಕಬ್ಬಿಗರ ಕಾವಂ ‘ ಎಂಬ ಚಂಪೂ ಕಾವ್ಯವನ್ನು ರಚಿಸಿದ್ದಾನೆ .
‘ ಕನ್ನಡ ನಾಡು – ನುಡಿ ‘ ಪದ್ಯದಲ್ಲಿ ಇರುವ ಎಲ್ಲಾ ಪದ್ಯಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆರಿಸಿಕೊಳ್ಳಲಾಗಿದೆ .
9th Kannada Nadu Nudi Poem Saramsha in Kannada
ನಮ್ಮ ಕನ್ನಡ ನಾಡು ನುಡಿಯ ವಿಶಿಷ್ಟತೆಯನ್ನು ನಮ್ಮ ನಾಡಿನ ಕವಿಗಳು ಮನಸಾರ ಹೊಗಳಿರುವುದನ್ನು , ಅವರ ಭಾಷಾ ಕಾಳಜಿಯನ್ನು ಅವರ ಕಾವ್ಯಗಳಲ್ಲಿ ಕಾಣಬಹುದು . ಶ್ರೀ ವಿಜಯನು ನಮ್ಮ ಕನ್ನಡದ ಜನಪದರು ಅಕ್ಷರಸ್ತರಲ್ಲದಿದ್ದರೂ ಕಾವ್ಯ ಪ್ರಯೋಗ ಪರಿಣತರಾಗಿದ್ದರು ಎನ್ನುತ್ತಾನೆ .
ನಯಸೇನನು ನಮ್ಮ ಕನ್ನಡವು ಕೆಲವು ಪಂಡಿತರಿಂದ ಸಂಸ್ಕೃತಮಯವಾಗುವುದನ್ನು ಸಹಿಸದೇ ಶುದ್ಧ ಕನ್ನಡವೇ ಇರಬೇಕೆಂದು ಬಯಸುತ್ತಾನೆ .
ನೇಮಿಚಂದ್ರನು ಕನ್ನಡ ನಾಡಿನ ಶ್ರೇಷ್ಠಕಾವ್ಯಗಳ ರಚನೆಯ ಬಗ್ಗೆ ಹೊಗಳಿದ್ದಾನೆ . ಮಹಲಿಂಗರಂರನು ನಮ್ಮ ಕನ್ನಡವು ಹೇಗೆ ಸರಳ ಸುಂದರ ಎಂಬುದನ್ನು ಹಲವು ಉಪಮೇಯಗಳೊಂದಿಗೆ ಹೊಗಳಿ ಸಂಸ್ಕೃತಕ್ಕಿಂತ ಯಾವುದರಲ್ಲೂ ಕಡಿಮೆಯಿಲ್ಲ ಎನ್ನುತ್ತಾನೆ .
ಆಂಡಯ್ಯನು ಕನ್ನಡನಾಡಿನ ಪ್ರಕೃತಿಯ ರಮ್ಯತೆಯನ್ನು ಮೆಚ್ಚಿ ಹೀಗೆ ಕನ್ನಡನಾಡಿನ ಪ್ರಕೃತಿ , ಸಂಸ್ಕೃತಿ ಹಾಗೂ ಭಾಷಾ ಹಿರಿಮೆಗಳನ್ನು ವಿವಿಧ ಕವಿಗಳು ವರ್ಣಿಸಿರುವುದನ್ನು ಪರಿಚಯಿಸುವುದೇ ಪ್ರಸ್ತುತ ಪದ್ಯಪಾಠದ ಆಶಯವಾಗಿದೆ ,
ಅರಿದು – ತಿಳಿದು ;
ಚದುರ ( ದ ) -ಚತುರ ( ತೃ ) ಜಾಣ :
ಪರಿಣಿತ – ತಜ್ಞ .
ಬೆರೆಸು – ಕೂಡಿಸು
ಅಗ್ಗಳ – ಶ್ರೇಷ್ಠ,
ಕಡಲು – ಸಮುದ್ರ
ಮೋಕ್ಷ – ಮುಕ್ತಿ
ಆರಯ – ಪಾಲನೆ
ಪದ- ಕ್ರಮ , ರೀತಿ
ಮತಿಗಳು – ಪ್ರತಿಭಾವಂತರು ;
ತೈಲ – ಎಣ್ಣೆ ;
ಸಕ್ಕದ ( ದ್ಧ ) – ಸಂಸ್ಕೃತ ( ತ್ಸ )
ಕಟ್ಟುಗೆ – ಸೇತುವೆ
ನರ – ಅರ್ಜುನ
ಉಷ್ಣ – ಶಾಖ ;
ಅ ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1. ಪದನರಿದು ನುಡಿಯುವವರು ಯಾರು ಎಂದು ಕವಿ ಹೇಳಿದ್ದಾನೆ ?
ಉತ್ತರ : ಪದನರಿದು ನುಡಿಯುವವರು ಕನ್ನಡ ನಾಡಿನ ಜನ
2 , ತುಪ್ಪದೊಡನೆ ಯಾವುದನ್ನು ಬೆರೆಸಬಾರದು ?
ಉತ್ತರ : ತುಪ್ಪದೊಡನೆ ತೈಲವನ್ನು ಬೆರೆಸಬಾರದು .
3. ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಯಾವುದು ?
ಉತ್ತರ : ಮಹಲಿಂಗರಂಗರವರ ಪ್ರಕಾರ ಸುಲಿದ ಬಾಳೆಯ ಹಣ್ಣನಂತೆ ಇರುವ ಭಾಷೆ ಕನ್ನಡ ,
ಆ ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯದಲ್ಲಿ ಉತ್ತರಿಸಿ .
1. ಕನ್ನಡಿಗರ ವಿಶೇಷತೆಯನ್ನು ಶ್ರೀ ವಿಜಯ ಹೇಗೆ ಸಾರಿದ್ದಾನೆ ?
ಉತ್ತರ : “ ಪದನಡೆದು ನುಡಿಯಲುಂ ನುಡಿ ದುದನಜೆದಾರಯಲುಮಾರ್ಪರಾ ನಾಡವರ್ಗಳ್ ಚದುರರ್ ನಿಜದಿಂ ಕುಜೆತೋ ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ ”
ಅಂದರೆ ಕನ್ನಡ ನಾಡಿನ ಜನತೆ ಕ್ರಮವರಿತು ನುಡಿಯಬಲ್ಲರು ನುಡಿದಿದ್ದನ್ನು ಅರಿತು ಪಾಲನೆ ಮಾಡಬಲ್ಲರು ಯಾವುದೇ ಅಕ್ಷರ ಜ್ಞಾನವಿಲ್ಲದಿದ್ದರು ಕಾವ್ಯ ರಚಿಸುವಂತಹ ಪರಿಣತರು ಕನ್ನಡನಾಡಿನ ಜನತೆ ನಿಜಕ್ಕೂ ಚತುರರು ಬುದ್ಧಿವಂತರು ಎಂದು ನಾಡಿನ ಜನಪದರ ಕಾವ್ಯರಚಿಸುವಂತಹ ಪರಿಣತಿಯನ್ನು ಕುರಿತು ಹೇಳಿದ್ದಾನೆ .
2. ಕನ್ನಡ ಮತ್ತು ಸಂಸ್ಕೃತ ಭಾಷಾ ಬಳಕೆಯ ಬಗ್ಗೆ ನಯಸೇನ ಏನು ಹೇಳುತ್ತಾನೆ ?
ಉತ್ತರ : “ ಸಕ್ಕದಮಂ ಪೇಡೆ ನೆಜ ಸಕ್ಕದಮಂ ಪೇಟಿ ಶುದ್ಧ ಕನ್ನಡದೊಳ್ ತಂ ದಿಕ್ಕುವುದೇ ಸಕ್ಕದಮಂ ತಕ್ಕುದೆ ಬೆರೆಸಿ ಧೃತಮುಮಂ ತೈಲಮುಮಂ ” ನಮಗೆ ತುಪ್ಪವೂ ಬೇಕು , ಎಣ್ಣೆಯೂ ಬೇಕು , ಸಂಸ್ಕೃತವೂ ಬೇಕು , ಕನ್ನಡವೂ ಬೇಕು . ಆದರೆ ಎಣ್ಣೆ – ತುಪ್ಪದ ಅಸ್ವಾದು ಮಿಶ್ರಣ ಬೇಡ ಅಂದರೆ
ಕನ್ನಡ ಸಂಸ್ಕೃತದ ಮಿಶ್ರಣ ಬೇಡ ಎಂದಿದ್ದಾನೆ . ಶುದ್ದ ಕನ್ನಡದೊಳ್ ತಂದಿಕ್ಕುವುದೆ ಸಕ್ಕದಮಂ ಎಂದಿದ್ದಾನೆ . ಕವಿ ನಯಸೇನ ,
3. ಕವೀಂದ್ರರ ಶ್ರೇಷ್ಠತೆಯನ್ನು ನೇಮಿಚಂದ್ರನು ಹೇಗೆ ವರ್ಣಿಸಿದ್ದಾನೆ ?
ಉತ್ತರ : “ ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ ಹರನಂ ನರಸೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ ಕೃತಿಬಂಧದೊಳ ಕಟ್ಟಿದರ್ ಮುಟ್ಟಿದರೆತ್ತಿ
ಮೆಟ್ಟಿದರದೇನಳವಗ್ಗಳಮೋಕವೀಂದ್ರರಾ ” ಕಪಿಸಂತತಿ ಸೇತುವೆಯನ್ನು ಕಟ್ಟಿದಂತೆ ಹರನು , ನರನು ಮುಗಿಲನ್ನು ಒತ್ತಿ ಹಿಡಿದಂತೆ , ಕವಿಗಳು ಶ್ರೇಷ್ಟ ಕೃತಿಗಳನ್ನು ರಚಿಸಿದವರು ಎಂದು ಕವಿ ನೇಮಿಚಂದ್ರ ಕನ್ನಡ ಕವೀಂದರ ಶ್ರೇಷ್ಠತೆಯನ್ನು ವರ್ಣಿಸಿದ್ದಾರೆ .
4. ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಹೇಗೆ ಸಾಧಿಸುತ್ತಾರೆ ?
ಉತ್ತರ : “ ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡೊರೆ ಸಾಲದೇ ಸಂಸ್ಕೃತದಲಿನ್ನೇನು ” ?
ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣಿನಂತೆ , ಸಿಗುರು ತೆಗೆದ ಕಬ್ಬಿನಂತೆ ಉಷ್ಣ ಆಳಿದ ಹಾಲಿನಂತೆ , ಸುಲಭವೂ ರುಚಿಯುಳ್ಳದ್ದೂ ಆಗಿದೆ . ಆದ್ದರಿಂದ ಕನ್ನಡ ಭಾಷೆಯಿಂದಲೇ ಮೋಕ್ಷಗಳಿಸಿಕೊಂಡರೆ ಸಾಕು ಸಂಸ್ಕೃತದಲ್ಲಿದೆ ಎಂದು ಕವಿ ಮಹಲಿಂಗರಂಗ ಪ್ರಶ್ನಿಸಿದ್ದಾರೆ
5. ಕನ್ನಡ ನಾಡಿನ ಪಾಕೃತಿಕ ವರ್ಣನೆಯನ್ನು ಆಂಡಯ್ಯ ಕವಿ ಹೇಗೆ ಸಾರಿದ್ದಾರೆ ?
ಉತ್ತರ : “ ಮಲ್ಲಿಗೆಯಲ್ಲದೆ ಸಂಪಗೆಯಲ್ಲದೆ ದಾಳಿಂಬವಲ್ಲದೊಪ್ಪುವ ಚೆಂದೆಂ ಗಲ್ಲದೆ ಮಾವಲ್ಲದೆ ಕೌಂ ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್ ” ಮಲ್ಲಿಗೆ , ಸಂಪಿಗೆ , ದಾಳಿಂಬೆ , ಒಪ್ಪುವ ಚಂದದ ಮಾವು, ತೆಂಗು, ಬಾಳೆ ಹೀಗೆ ಹಲವಾರು ಗಿಡ ಮರಗಳಿಂದ ಕೂಡಿರುವ ಕನ್ನಡನಾಡು ಅತ್ಯಂತ ಸಂಪದ್ಭರಿತವಾಗಿದೆ ಎಂದು ಕವಿ ಆಂಡಯ್ಯನವರು ಕನ್ನಡನಾಡಿನ ಪ್ರಾಕೃತಿಕ ವರ್ಣನೆಯನ್ನು ಸಾರಿದ್ದಾರೆ .
ಇ ) ಕೆಳಗಿನ ಪ್ರಶ್ನೆಗೆ ಎಂಟು ಹತ್ತು ವಾಕ್ಯದಲ್ಲಿ ಉತ್ತರಿಸಿ .
1. ಕನ್ನಡ ನಾಡಿನ ವಿಸ್ತಾರ , ಪ್ರಾಕೃತಿಕ ಸಂಪತ್ತಿನ ಬಗ್ಗೆ ಕವಿಗಳು ಹೇಗೆ ವರ್ಣಿಸಿದ್ದಾರೆ ?
ಉತ್ತರ : ಕನ್ನಡ ನಾಡು ನುಡಿಯ ವೈಶಿಷ್ಟ್ಯ ಕುರಿತು ಪ್ರಾಚೀನ ಕಾಲದಿಂದಲೂ ಕವಿ ಪರಂಪರೆ ಮನಸಾರೆ ಬಣ್ಣಿಸುತ್ತಾ ಬಂದಿದೆ . ಕನ್ನಡ ಸಂಸ್ಕೃತಿ , ಸೊಬಗು ವೈಭವ , ಸೌಂದರ್ಯ ಅಪೂರ್ವ ಹಾಗೂ ಅವಿಸ್ಮರಣೀಯ .
ಸಂಸ್ಕೃತ ಪ್ರಭಾವ ದಟ್ಟವಾಗಿದ್ದ ಆ ಕಾಲದಲ್ಲಿ ಕನ್ನಡದ ಹಿರಿಮೆ ಹಾಗೂ ಸಂಸ್ಕೃತಿಯನ್ನು ಮೆರೆದ ಸಾಹಸ ಅವರದು .
ಕನ್ನಡನಾಡು ವಿಸ್ತಾರವಾದ ಭೂಮಿ , ಇಲ್ಲಿನ ಜನ ಪ್ರತಿಭಾ ಸಂಪನ್ನರು , ವಿಶೇಷವಾಗಿ ‘ ಕುಣಿತೋ ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ’ಕಾವ್ಯ ಸೃಷ್ಟಿಯಲ್ಲಿ ಮೇಲುಗೈ ಪಡೆದವರು .
ಇಲ್ಲಿನ ಪ್ರಾಕೃತಿಕ ಸಂಪತ್ತು ಶ್ರೀಮಂತವಾದುದು ಭೌಗೋಳಿಕ ಹರವಿನ ಸಾಂಸ್ಕೃತಿಕ ವೈಭವ ಮನೋಹರವಾಗಿದೆ . ಇಲ್ಲಿ ಮಲ್ಲಿಗೆ , ಸಂಪಿಗೆಯ ಪರಿಮಳವಿದ ದಾಳಿಂಬೆ , ತೆಂಗು , ಮಾವು , ಬಾಳೆ ಹೀಗೆ ಹಲವಾರು ಗಿಡಮರಗ ಳಿಂದ ತುಂಬಿದ್ದು ಪ್ರಾಕೃತಿಕವಾಗಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ .
2. ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಕವಿಗಳಿಗಿರುವ ಅಭಿಮಾನ ಹೇಗೆ ವ್ಯಕ್ತವಾಗಿದೆ . ?
ಉತ್ತರ : ಕನ್ನಡ ನಾಡು ನುಡಿಯ ವೈಶಿಷ್ಟ್ಯ ಕುರಿತು ಪ್ರಾಚೀನ ಕಾಲದಿಂದಲು ಕವಿ ಪರಂಪರೆ ಮನಸಾರೆ ಬಣ್ಣಿಸುತ್ತಾ ಬಂದಿದೆ ಕನ್ನಡ ನಾಡಿನ ಜನತೆ ಕ್ರಮವರಿತು ನಡೆಯಬಲ್ಲರು , ನುಡಿದದ್ದನ್ನು ಅರಿತು ಪಾಲನೆ ಮಾಡಬಲ್ಲರು .
ಕಾವ್ಯರಚಿಸುವಂತಹ ಪರಿಣತರು , ಕನ್ನಡ ನಾಡಿನ ಜನತೆ ನಿಜಕ್ಕೂ ಚತುರರು ಎಂದು ಶ್ರೀ ವಿಜಯ ತನ್ನ ಕವಿರಾಜಮಾರ್ಗದಲ್ಲಿ ತಿಳಿಸಿದ್ದಾನೆ . ನಮಗೆ ತುಪ್ಪವೂ ಬೇಕು , ಎಣ್ಣೆಯು ಬೇಕು , ಸಂಸ್ಕೃತವೂ ಬೇಕು .
ಕನ್ನಡವೂ ಬೇಕು , ಆದರೆ ತುಪ್ಪದ ಅಸ್ವಾದು ಮಿಶ್ರಣ ಬೇಡ ಅಂದರೆ ಕನ್ನಡ ಸಂಸ್ಕೃತದ ಮಿಶ್ರಣಬೇಡ ಎಂದಿದ್ದಾನೆ . ಶುದ್ಧ ಕನ್ನಡದೊಳ್ ತಂದಿಕ್ಕುವುದೆ ಸಕ್ಕದಮಂ ಎಂದಿದ್ದಾನೆ
ಕವಿ ನಯಸೇನ , ಕಪಿಸಂತತಿ ಸೇತುವೆಯನ್ನು ಕಟ್ಟಿದಂತೆ , ಹರನು , ನರನು ಮುಗಿಲನ್ನು ಒತ್ತಿ ಹಿಡಿದಂತೆ , ಕವಿಗಳು ಶ್ರೇಷ್ಟವಾದ ಕೃತಿಗಳನ್ನು ರಚಿಸಿದರು
ಎಂದು ಕವಿ ನೇಮಿಚಂದ್ರ ಕನ್ನಡ ಕವೀಂದ್ರರ ಶ್ರೇಷ್ಟತೆಯನ್ನು ವರ್ಣಿಸಿದ್ದಾನೆ ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣನೆಂತೆ , ಸಿಗುರು ತೆಗೆದ ಕಬ್ಬಿನಂತೆ ಉಷ್ಣ ಆಳಿದ ಹಾಲಿನಂತೆ , ಸುಲಭವೂ ರುಚಿಯುಳ್ಳದ್ದೂ
ಆಗಿದೆ ಆದ್ದರಿಂದ ಕನ್ನಡ ಭಾಷೆಯಿಂದಲೆ ಮೋಕ್ಷಗಳಿಸಿಕೊಂಡರೆ ಸಾಕು ಸಂಸ್ಕೃತದಲ್ಲೆನಿದೆ ಎಂದು ಕವಿ ಮಹಲಿಂಗರಂಗರು ಕನ್ನಡ ಭಾಷೆ ಸಾಹಿತ್ಯದ ಬಗ್ಗೆ ಅಭಿಮಾನದಿಂದ ನುಡಿದಿದ್ದಾರೆ
ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
1. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ ,
ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ , ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು ಕವಿರಾಜಮಾರ್ಗಕಾರ ಶ್ರೀವಿಜಯ ಕನ್ನಡ ನಾಡಿನ ಜನಪದರನ್ನು ಹೊಗಳುವ ಸಂದರ್ಭದಲ್ಲಿ ಹೇಳಿದ್ದಾನೆ . ಪ್ರಾಚೀನ ಜನಪದರಿಗೆ ಅಕ್ಷರದ ಅರಿವು ಇಲ್ಲದಿದ್ದರು ಸಹ ,
ದೇಶಿ ನುಡಿಯಲ್ಲಿ ಉತ್ತಮವಾದ ಸಾಹಿತ್ಯರಚನಾ ಸಾಮರ್ಥ್ಯವನ್ನು ಹೊಂದಿದ್ದರು . ಶಾಸ್ತ್ರ ಸಾಹಿತ್ಯವನ್ನು ಅರಿಯದಿದ್ದರೂ ಅದಕ್ಕೆ ಸರಿಸಮಾನವಾದ ಸಾಹಿತ್ಯವನ್ನು ರಚಿಸಿದ್ದರು ಎಂದು ಹೇಳುವಾಗ ಈ ಮಾತು ಬಂದಿದೆ
ಸ್ವಾರಸ್ಯ : ಕನ್ನಡ ನಾಡಿನ ಜನಪದರ ಸಾಹಿತ್ಯ ಶಕ್ತಿಯ ಬಗ್ಗೆ , ಕನ್ನಡ ನಾಡು , ನುಡಿ , ಜನತೆಯ ಬಗೆಗಿರುವ ಈ ಮಾತುಗಳು ಸ್ವಾರಸ್ಯಕರವಾಗಿವೆ .
2. ತಕ್ಕುದೆ ಬೆರೆಸಲೆ ಧೃತಮುಮಂ ತೈಲಮುಮಂ .
ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ “ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಅನೇಕ ಕವಿಗಳು ಕನ್ನಡದಲ್ಲಿ ಉತ್ತಮ ಕಾವ್ಯಗಳನ್ನು ರಚಿಸಿದರೂ ಅದನ್ನು ಸಂಸ್ಕೃತಮಯವಾಗಿ ಮಾಡಿಬಿಟ್ಟರು . ಇದನ್ನು ಕಂಡ ಕವಿ ನಯಸೇನ ನಮಗೆ ತುಪ್ಪವೂ ಬೇಕು ,
ಎಣ್ಣೆಯೂ ಬೇಕು , ಸಂಸ್ಕೃತವೂ ಬೇಕು , ಕನ್ನಡವೂ ಬೇಕು . ಆದರೆ ಎಣ್ಣೆ ತುಪ್ಪದ ಆಸ್ವಾದು ಮಿಶ್ರಣ ಬೇಡ ಎಂದು ಹೇಳುವ ಸಂದರ್ಭದಲ್ಲಿ ಕವಿ ನಯಸೇನನು ಈ ಮಾತನ್ನು ಹೇಳಿದ್ದಾನೆ .
ಸ್ವಾರಸ್ಯ : ಎಣ್ಣೆ ತುಪ್ಪ ಹೇಗೆ ಬೇರೆ ಬೇರೆ ರುಚಿಯಾಗಿರುತ್ತವೆಯೇ ಹಾಗೆಯೇ ಕನ್ನಡ ಭಾಷೆ , ಸಂಸ್ಕೃತ ಭಾಷೆಗಳು ಸಹ ಅದರಿಂದ ಇವುಗಳ ಮಿಶ್ರಣ ಕಾವ್ಯ ರಚನೆ ಬೇಡ ಎಂಬ ಮಾತಿನಲ್ಲಿ ಕನ್ನಡ ಭಾಷೆಯ ಬಗ್ಗೆ ತೋರಿರುವ ಅಭಿಮಾನ ಸ್ವಾರಸ್ಯಕರವಾಗಿದೆ .
3. ಕಟ್ಟುಗೆ ಕಟ್ಟುದಿರ್ಕೆ ಕಡಲಂ ಕಪಿಸಂತತಿ ,
ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಕಪಿ ಸಂತತಿಯು ಕಡಲಿಗೆ ಸೇತುವೆಯನ್ನು ಕಟ್ಟಿದಂತೆ , ಹರನು ನರನು ಮುಗಿಲನ್ನು ಗಂಟಲಲ್ಲಿ ಒತ್ತಿ ಹಿಡಿದಂತೆ , ಕನ್ನಡ ಕವಿಗಳು ಹಂತ ಹಂತವಾಗಿ ಕಾವ್ಯಗಳನ್ನು ರಚಿಸುತ್ತಾ ,
ಉತ್ತಮ ಕೃತಿಗಳನ್ನು ರಚಿಸಿ ಕವೀಂದ್ರರೇ ಆದರೆಂದು ಹೇಳುವ ಸಂದರ್ಭದಲ್ಲಿ ನೇಮಿಚಂದ್ರ ಕನ್ನಡ ಕವಿಗಳ ಮಹತ್ವವನ್ನು ತಿಳಿಸುತ್ತಾ ಹೇಳಿದ್ದಾರೆ .
ಸ್ವಾರಸ್ಯ : ಕನ್ನಡ ನಾಡಿನ ಕವಿಗಳು ತಮ್ಮ ಕಾವ್ಯಗಳಲ್ಲಿ ಎಂತಹ ವಿಷಯಗಳನ್ನಾದರೂ ಕಟ್ಟಿ ಕೊಡುವ ಶಕ್ತಿ ಉಳ್ಳವರು ಎಂದು ಅವರ ಬಗ್ಗೆ ಇರುವ ಅಭಿಮಾನ ಸ್ವಾರಸ್ಯಕರವಾಗಿದೆ .
4. ಕಳೆದ ಸಿಗುರಿನ ಕಬ್ಬಿನಂದದಿ ,
ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ “ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ
ಸಂದರ್ಭ : ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣನೆಂತೆ ಸಿಗುರು ತೆಗೆದ ಕಬ್ಬಿನಂತೆ , ಉಷ್ಟ ಅಳಿದ ಹಾಲಿನಂತೆ ಸುಲಭವೂ ರುಚಿಯುಳ್ಳದ್ದೂ ಆಗಿದೆ .
ಮೋಕ್ಷವನ್ನು ಗಳಿಸಿಕೊಳ್ಳಲು ಈ ಭಾಷೆಯೇ ಸಾಕು ಸಂಸ್ಕೃತದಲ್ಲೆನಿದೆ ? ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಕವಿ ಮಹಲಿಂಗರಂಗರವರು ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಕನ್ನಡ ಭಾಷೆಯನ್ನು ಕಲಿಯಲು ಸರಳವೂ , ಸುಂದರವೂ ಆದ ಭಾಷೆಯಾಗಿದೆ ಕನ್ನಡವನ್ನು ಬೇಗ ಕಲಿತು ಮೋಕ್ಷ ಸಂಪಾದನೆ ಮಾಡಬಹುದು ಎಂಬ ಕವಿ ಕನ್ನಡಾಭಿಮಾನದ ಮಾತು ಸ್ವಾರಸ್ಯಕರವಾಗಿದೆ .
5. ದಾಳಿಂಬವಲ್ಲದೊಪುವ ಚೆಂದೆಂ
ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಕನ್ನಡ ನಾಡು ಮಲ್ಲಿಗೆ , ಸಂಪಿಗೆಯ ಪರಿಮಳವಿದೆ ದಾಳಿಂಬೆ , ತೆಂಗು , ಮಾವು , ಬಾಳೆ ಹೀಗೆ ಹಲವಾರು ಗಿಡಮರಗಳಿಂದ ತುಂಬಿದ್ದು ಪ್ರಾಕೃತಿಕವಾಗಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ . ಎಂದು ಕವಿ ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : ಆಂಡಯ್ಯ ಕವಿಗೆ ಕನ್ನಡ ನಾಡು , ಕನ್ನಡ ಭಾಷೆಯ ಬಗ್ಗೆ ಇರುವ ಅಭಿಮಾನ ಸ್ವಾರಸ್ಯಕರವಾಗಿದೆ .
ಕೊಟ್ಟಿರುವ ಪದ್ಯಭಾಗಗಳನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ .
ಪದನರದು ನುಡಿಯಲುಂ ನುಡಿ
ದುದನಟಿದಾರಯಲುಮಾರ್ಪರಾ ನಾಡವರ್ಗಳ್|
ಚದುರರ್ ನಿಜದಿಂ ಕುಚಿತೋ
ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್|
ಮಲ್ಲಿಗೆಯಲ್ಲದೆ ಸಂಪಗೆ|
ಯಲ್ಲದೆ ದಾಳಿಂಬವಲ್ಲದೊಡ್ಡುವ ಚೆಂದೆಂ||
ಗಲ್ಲದೆ ಮಾವಲ್ಲದೆ ಕೌಂ|
ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್|| -ಆಂಡಯ್ಯ
ಉತ್ತರ : ಪದನರಿದು ನುಡಿಯುವವರು ಕನ್ನಡ ನಾಡಿನ ಜನ
ಉತ್ತರ : ತುಪ್ಪದೊಡನೆ ತೈಲವನ್ನು ಬೆರೆಸಬಾರದು .
ಉತ್ತರ : ಮಹಲಿಂಗರಂಗರವರ ಪ್ರಕಾರ ಸುಲಿದ ಬಾಳೆಯ ಹಣ್ಣನಂತೆ ಇರುವ ಭಾಷೆ ಕನ್ನಡ ,
ಇತರೆ ವಿಷಯಗಳು:
9th Standard All Subject Notes
9th Standard Kannada Textbook karnataka Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
All Subjects Notes
All Notes App
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
9ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ ಎಲ್ಲಿ ಡೌನ್ಲೋಡ್ ಮಾಡಬಹುದು
KANNADA DEEVIGE APP
ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
Leave a Reply Cancel reply
Your email address will not be published. Required fields are marked *
Save my name, email, and website in this browser for the next time I comment.
- NOTIFICATION
- CENTRAL GOV’T JOBS
- STATE GOV’T JOBS
- ADMIT CARDS
- PRIVATE JOBS
- CURRENT AFFAIRS
- GENERAL KNOWLEDGE
- Current Affairs Mock Test
- GK Mock Test
- Kannada Mock Test
- History Mock Test
- Indian Constitution Mock Test
- Science Mock Test
- Geography Mock Test
- Computer Knowledge Mock Test
- INDIAN CONSTITUTION
- MENTAL ABILITY
- ENGLISH GRAMMER
- COMPUTER KNOWLDEGE
- QUESTION PAPERS
10th kannada
10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು ।10th class prabandha kannada.
10th class prabandha kannada, 10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು, 10th standard kannada prabandha pdf, 10th standard kannada prabandha, class 10 kannada prabandha, class 10 kannada essay, 10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು pdf, 10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು
10th Class Prabandha Kannada
ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ
ಜನಸಂಖ್ಯೆ ಪ್ರಬಂಧ
ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ
ಪ್ರಕೃತಿಯ ಬಗ್ಗೆ ಪ್ರಬಂಧ
ಭೂ ಮಾಲಿನ್ಯ ಕುರಿತು ಪ್ರಬಂಧ
ಶಬ್ದ ಮಾಲಿನ್ಯ ಕುರಿತು ಪ್ರಬಂಧ
ಗ್ರಂಥಾಲಯ ಮಹತ್ವ ಪ್ರಬಂಧ
ಹವ್ಯಾಸಗಳು ಬಗ್ಗೆ ಪ್ರಬಂಧ
ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ
ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು ಅರ್ಥ ವಿವರಣೆ
ಒಂದು ರಾಷ್ಟ್ರ-ಒಂದು ಭಾಷೆ ಪ್ರಬಂಧ
ಧಾರ್ಮಿಕ ಹಬ್ಬಗಳು ಪ್ರಬಂಧ
10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು
ಸಂಪರ್ಕ ಮಾಧ್ಯಮವಾಗಿ ದೂರದರ್ಶನದ ಪಾತ್ರ:
ಸಂಪರ್ಕ ಮಾಧ್ಯಮವೆಂದರೆ ಜನರ ಮತ್ತು ದೇಶಗಳ ನಡುವಿನ ಸಂಪರ್ಕವನ್ನು ಬೆಸೆಯುವ ಮಾಧ್ಯಮಗಳು, ಸಂಪರ್ಕ ಮಾಧ್ಯಮಗಳಲ್ಲಿ ವರ್ತಮಾನ ಪತ್ರಿಕೆಗಳು, ರೇಡಿಯೋ ಮತ್ತು ದೂರದರ್ಶನಗಳು ಸೇರುತ್ತವೆ. ಇತ್ತೀಚೆಗೆ ಇಂಟರ್ನೆಟ್ ಸಂಪರ್ಕ ಜಾಲಗಳೂ ಈ ಶೇಣಿಯಲ್ಲಿ ಸೇರಿವೆ. ಈ ಸಂಪರ್ಕ ಮಾಧ್ಯಮಗಳಲ್ಲಿ ವರ್ತಮಾನ ಪತ್ರಿಕೆಗಳು ಓದು ಬರಹ ಬಲಂ ತಹ ಅಕ್ಷರಸ್ಥರಿಗೆ ಉಪಕಾರಿಯಾಗಿವೆ. ಇನ್ನು ರೇಡಿಯೋ ಓದು-ಬರಹ ಬಾರದವರಿಗೆ ವರ್ತ ಕೇಳಿಸುತ್ತದೆ; ಆದರೆ ದೂರದರ್ಶನವು ಒಂದು ದೃಕ್ ಶ್ರವಣ ಸಾಧನ. ಇದು ಹೆಚ್ಚು ಪರಿಣಾಮಕಾರಿಂ ವರ್ತಮಾನವನ್ನು ಕೇಳುವುದರ ಜೊತೆ ಜೊತೆ ಸಂಬಂಧಿಸಿದ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ. ದೂರದರ್ಶನ ಈ ಶತಮಾನದ ಅದ್ಭುತಗಳಲ್ಲೊಂದಾಗಿದೆ. ಇದು ಅಂಗೈಯಲ್ಲಿ ಅರಮನೆಯನ್ನು ತೋರಿಸುತ್ತದೆ. ಜಗತ್ತಿನ ಯಾವುದೇ ಕ್ಷಣಗಳಲ್ಲಿ ಅಥ ನೇರವಾಗಿ ವೀಕ್ಷಿಸುವ ಅವಕಾಶವನ್ನು ಕೈಯಲ್ಲಿ ಘಟಿಸಿದ ಘಟನೆಯನ್ನು ಕೆಲವೇ ಒದಗಿಸಿದೆ. ಇದೀಗ ಈ ಮಾಧ್ಯಮಗಳು ರದತೆಯನ್ನು ಪಡೆದಿದ್ದು ಹಲವಾರು ಚಾನಲುಗಳ ಮೂಲಕ ವಿವಿಧ ಬಗೆಯ ಕಾರಕ್ರಮಗಳನ್ನು 24 ಗಂಟೆಯೂ ಪುಸಾರ ಮಾಡಲು ಸಾಧ್ಯವಾಗಿದೆ. ದೂರದರ್ಶನವು ಸಮಾಜದ ಪ್ರತಿ ವರ್ಗದ ವರ್ಣದ ಅಂತಸ್ತಿನ ಜನರ ಅಭಿಲಾಷೆಗಳನ್ನು ಪೂರೈಸಬಲ್ಲುದಾಗಿದೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಅಂದರೆ ವ್ಯವಸಾಯ, ಕೈಗಾರಿಕೆ, ಶಿಕ್ಷಣ,
ವಿಜ್ಞಾನ, ಕ್ರೀಡೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳ ಜೊತೆಗೆ ಮನೋರಂಜನೆಯನ್ನು ಅವರವರ ಅಪೇಕ್ಷೆಯ ಮೇರೆಗೆ ಕೆಲವೊಂದು ಇತಿಮಿತಿಗಳಲ್ಲಿ ಒದಗಿಸಬಲ್ಲದು. ದೂರದರ್ಶನವು ಎಲ್ಲ ವಯೋಧರ್ಮದವರ ಹಾಗೂ ಮನೋಧರ್ಮದವರ ಬಯಕೆಯನ್ನು ಪೂರೈಸಬಲ್ಲುದಾಗಿದೆ. ಇಂದು ದೇಶದ ಪ್ರತಿಶತ ಎಪ್ಪತ್ತು ಮಂದಿ ಈ ದೂರದರ್ಶನದ ಪುಭಾವಲಯದಲ್ಲಿದ್ದು, ಅದರ ಲಾಭವನ್ನು ಪಡೆಯುತ್ತಿದ್ದಾರೆ. ಇಷ್ಟು ಪರಿಣಾಮಕಾರಿಯಾಗಿ ಉಳಿದ ಯಾವುದೇ ಸಂಪರ್ಕ ಸಾಧನವೂ ಯಶಸ್ಸನ್ನು ಪಡೆದಿಲ್ಲವೆಂದರೆ ಉತೇಕ್ಷೆಯಾಗಲಾರದು.
ಸಂಪರ್ಕ ಮಾಧ್ಯಮವಾಗಿ ಪತ್ರಿಕೆ ಪಾತ್ರ: 10th Class Prabandha Kannada
ದೇಶ-ದೇಶಗಳ ಮತ್ತು ಜನರ ನಡುವೆ ಸಂಪರ್ಕವನ್ನು ಕಲ್ಪಿಸುವ ಸಾಧನಗಳೇ ಸಂಪರ್ಕ ಸಾಧನಗಳು. ಇವುಗಳಲ್ಲಿ ಇತ್ತೀಚಿನ ಇಂಟರ್ನೆಟ್ ಸೇರಿದಂತೆ ದೂರದರ್ಶನ, ಕೊಡುಗೆಯ ರೇಡಿಯೋ ಮತ್ತು ವರ್ತಮಾನ ಪತ್ರಿಕೆಗಳು ಗಣನೀಯ ಬಂದಿವೆ. ಇವುಗಳಲ್ಲಿ ವರ್ತಮಾನ ಪತ್ರಿಕೆಗಳು ವಿದ್ಯಾವಂತರ ಪಾಲಿಗೆ ದಾರಿದೀವಿಗೆಗಳಾಗಿವೆ. ಇವು ಪಪಂಚದ ಮೂಲೆ ಮೂಲೆಯಲ್ಲಿನ ಸಮಾಚಾರವನ್ನು ಜನರ ಮನೆಯ ಬಾಗಿಲಿಗೆ ಕೊಂಡೊಯುತ್ತವೆ. ಈ ಪತ್ರಿಕೆಗಳಲ್ಲಿ ದೈನಿಕ, ಸಾಪ್ತಾಹಿಕ, ಪಾಕ್ಷಿಕ ಮತ್ತು ಮಾಸಿಕ ಪತ್ರಿಕೆಗಳೂ ಇವೆ.
ಇನ್ನಷ್ಟು ವಿಸ್ತಾರವಾಗಿ ಹೇಳುವುದಾದರೆ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ವೈಜ್ಞಾನಿಕ ವಿಷಯಗಳನೇ ಅಲ್ಲದೆ ಮನೋರಂಜನೆ, ಕ್ರೀಡೆ, ಕಥೆ, ಕವನ, ಹವಾಮಾನ, ಮಾರುಕಟ್ಟೆಯ ವಿಶೇಷ ಮಾಹಿತಿಗಳನ್ನು ಪ್ರತಿನಿತ್ಯ ಜನರ ಮನದ ಕದವನ್ನು ಬಡಿದು ಎಬ್ಬಿಸಿ ಸೂಚಿಸುವ ಪ್ರಬಲ ಮಾಧ್ಯಮಗಳ ಪತ್ರಿಕೆಗಳು. ಪತ್ರಿಕೆಗಳು, ರಾಜಕೀಯ, ಸಾಮಾಜಿಕ ಚಿತ್ರಣಕ್ಕೆ ಕೈಗನ್ನಡಿಗಳಾಗಿವೆ. ಆದುದರಿಂದ ಈ ಪತ್ರಿಕೆಗಳು ಸಮಾಜ ವನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವನ್ನು ತಪ್ಪಾಗಲಾರದು. ಪತ್ರಿಕೆಗಳು ರಾಷ್ಟ್ರದ ರಾ ಕಾರ್ಯ ನಿರ್ವಹಿಸುತ್ತಿವೆ.
ಸಂಪರ್ಕ ಮಾಧ್ಯಮವಾಗಿ ದೂರವಾಣಿಯ ಪಾತ್ರ: 10th Class Prabandha Kannada
ರಾಷ್ಟ್ರ-ರಾಷ್ಟ್ರಗಳ, ದೇಶ-ದೇಶಗಳ ಮತ್ತು ಜನರ ನಡುವೆ ಸಂಪರ್ಕವನ್ನು ಸೃಷ್ಟಿಸುವ ಸಾಧನಗಳೇ ಸಂಪರ್ಕಸಾಧನ ಗಳು, ಇವುಗಳಲ್ಲಿ ದೂರದರ್ಶನ, ಆಕಾಶವಾಣಿ, ವರ್ತಮಾನ ಪತ್ರಿಕೆಗಳು ಪ್ರಮುಖವಾದವುಗಳು. ಅಂತೆಯೇ ಇತ್ತೀಚೆಗೆ ಅತಿ ಮಹತ್ವವನ್ನು ಪಡೆಯುತ್ತಿರುವ ದೂರವಾಣಿಗಳು ಸಹ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿವೆ. ದೂರವಾಣಿಯು ಸ್ಥಳೀಯ ಮತ್ತು ಜಾಗತಿಕ ಜನತೆಯನ್ನು ಬೆಸೆಯುವ ಪುಬಲ ಸಾಧನ, ನಗರಗಳಲ್ಲಿ ಪ್ರಯಾಣ ದಟ್ಟಣೆ ಹೆಚ್ಚಿದ್ದು ಸಮಯಾಭಾವವಿರುವ ಜನರಿಗೆ ಇದೊಂದು ವರದಾನವೇ ಸರಿ. ಕುಳಿತಲ್ಲಿಂದಲೇ ತಮ್ಮ ಆಪ್ತರೊಡನೆ ಸಮಾಲೋಚನೆ ನಡೆಸಲು ಸಾಧ್ಯ. ವಾಣಿಜ್ಯ ಕ್ಷೇತ್ರದಲ್ಲಿ ಮತ್ತು
ಕಚೇರಿ ವ್ಯವಹಾರಗಳಲ್ಲಿ ದೂರವಾಣಿಯು ಅತಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಅದರ ಹೆಸರೇ ಹೇಳುವಂತೆ ದೂರದಲ್ಲಿರುವವರೊಡನೆ ನೇರವಾಗಿ ಸಂಪರ್ಕವನ್ನು ಸಾಧಿಸುವಲ್ಲಿ ಗುರುತರವಾದ ಪಾತ್ರವನ್ನು ನಿರ್ವಹಿಸುತ್ತದೆ. ಇನ್ನು ಹೊರಗಿನ ಊರು, ಪಟ್ಟಣ, ದೇಶ ಮುಂತಾದೆಡೆ ವಾಸಿಸುವಂತಹ ಬಂದು ಬಾಂಧವರೊಡನೆ ಸಹ ಸಂಪರ್ಕ ಬೆಳೆಸಲು, ಸಾವು ನೋವಿನ ತುರ್ತು ಸಮರ, ಅನ್ನು ಇದೊಂದು ಅತ್ಯುಪಯುಕ್ತ ಸಾಧನವೆನಿಸಿದೆ. ಪೇಜ ಮೊಬೈಲ್ ಫೋನು, ಇತ್ಯಾದಿ ದೂರವಾಣಿ ಇತ್ತೀಚಿನ ಬೆಳವಣಿಗೆ ಗಳು, ಆಧುನಿಕ ಕಾರಣದಿಂದಾಗಿ ನಾವು ಇಂದು ವಿದೇಶ ನಮ್ಮ ಆತ್ಮೀಯರ ಜೊತೆಗೆ ಎದುರುಗಡೆ ಇರುವಪೇ ಸಹಜವಾಗಿ ಚಿತ್ರಸಹಿತ ದೂರವಾಣಿಯಲ್ಲಿ ಮಾತನಾಡಬಹುದಾಗಿದೆ.
ಇತರೆ ಲಿಂಕ್ :
- ಶಿವರಾಮ ಕಾರಂತ ಅವರ ಬಗ್ಗೆ
- ಕರ್ನಾಟಕದ ನದಿಗಳು
Leave a Reply Cancel reply
Your email address will not be published. Required fields are marked *
Save my name, email, and website in this browser for the next time I comment.
- Privacy Policy
- Terms and Conditions
IMAGES
VIDEO
COMMENTS
Kannada Nadu Nudi Prabandha Samskruti Bagge Prabandha ಕನ್ನಡ ನಾಡು ನುಡಿ ಪ್ರಬಂಧ, Essay About Kannada Naadu Nudi Speech in Kannada Language
ಇದರಲ್ಲಿ 50+ ಕನ್ನಡ ಪ್ರಬಂಧಗಳು ಇದರಲ್ಲಿವೆ, Kannada Prabandhagalu, Kannada prabandha, Prabandha in Kannada, ಪ್ರಬಂಧ ವಿಷಯಗಳು Kannada Prabandha List
ಕನ್ನಡದಲ್ಲಿ ಪ್ರಬಂಧ ಬರೆಯುವುದು ಹೇಗೆ, prabandha bareyuva vidhana, ಪ್ರಬಂಧ ಎಂದರೇನು , prabandha in kannada writing, ಪ್ರಬಂಧ ಬರೆಯುವ ವಿಧಾನ. ಪ್ರಬಂಧ ಬರೆಯುವುದು ಹೇಗೆ
Prabandhagalu in Kannada PDF. 350+ ಕನ್ನಡ ಪ್ರಬಂಧಗಳು | Prabandhagalu in Kannada Essay List Free For Students.
ದಸರಾ ಬಗ್ಗೆ ಪ್ರಬಂಧ ಕನ್ನಡ, Essay About Dasara in Kannada, Nada Habba Dasara Essay in Kannada, Dasara Festival Prabandha in Kannada
ಪ್ರಬಂಧ ಬರೆಯುವ ವಿಧಾನ | Prabandha Bareyuva Vidhana in Kannada. ಇತರ ವಿಷಯಗಳು: ಸ್ವಚ್ಛ ಭಾರತ ಅಭಿಯಾನ ಬಗ್ಗೆ ಪ್ರಬಂಧ. ಮಹಿಳಾ ಸಬಲೀಕರಣ ಯೋಜನೆಗಳು
ದೀಪಾವಳಿ ಬಗ್ಗೆ ಪ್ರಬಂಧ. ಸ್ವಚ್ಛ ಭಾರತ ಆಂದೋಲನ ಪ್ರಬಂಧ. ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ. ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ. ಇಂಧನ ಸಂರಕ್ಷಣೆ ಪ್ರಬಂಧ ...
Prabandha ವಿದ್ಯಾರ್ಥಿಗಳಿಗೆ ಕನ್ನಡ ಪ್ರಬಂಧ ವಿಷಯಗಳು: 180+ಎಲ್ಲಾ ವಿಷಯಗಳ ...
How to Write Competitive Kannada Essays. ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ನಾಗರಿಕ ಸೇವಾ ಪರೀಕ್ಷೆ, ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆ, ಫಾರೆಸ್ಟ್ ಸರ್ವಿಸ್ ...
ರೈತ ದೇಶದ ಬೆನ್ನೆಲುಬು ಪ್ರಬಂಧ Raitha Deshada Bennelubu Prabandha farmer is the backbone of our country essay in kannada
Prabanda in Kannada, ಕನ್ನಡ ಪ್ರಬಂಧಗಳು, Essay in Kannada, ಪ್ರಬಂಧ ವಿಷಯಗಳು, Kannada Prabandhagalu, kannada prabandha ...
ಕನ್ನಡ ನಾಡು ನುಡಿ ಪ್ರಬಂಧ | Kannada Nadu Essay | Kannada Naadu Nudi Prabandha in Kannada. ಶೀರ್ಷಿಕೆ: ಕನ್ನಡ ನಾಡು - ಸಂಸ್ಕೃತಿ, ಇತಿಹಾಸ ಮತ್ತು ಪ್ರಗತಿಯ ಚಿತ್ರಣ. ಪರಿಚಯ: ಕನ್ನಡ ನಾಡು ...
ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಪ್ರಬಂಧ. ಸ್ವಚ್ಛ ಭಾರತ್ ಅಭಿಯಾನ ಪ್ರಬಂಧ. Points. Upvote Downvote. ಕನ್ನಡ ನಾಡಿನ ಹಿರಿಮೆ ಪ್ರಬಂಧ, Kannada Nadina Hireme ...
This entry was posted in Prabandha and tagged Essay in Kannada, Kannada, My School, ನನ್ನ ಶಾಲೆ, ಪ್ರಬಂಧ, ಪ್ರಬಂಧ ಕನ್ನಡ. kannadastudy24 ಕರ್ನಾಟಕದ ಐತಿಹಾಸಿಕ ತಾಣಗಳು | Historical Places Of Karnataka In Kannada
ಕನ್ನಡ ನಾಡು ನುಡಿ ಪ್ರಬಂಧ | Kannada Nadu Essay | Kannada Naadu Nudi Prabandha in Kannada. Posted on December 4, 2023 December 4, 2023 by sharathkumar30ym WhatsApp Group Join Now
ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಪ್ರಬಂಧ Prachina Smarakagala Samrakshane Prabandha Conservation of Ancient Monuments Essay in Kannada. ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಪ್ರಬಂಧ
1362. ಮಳೆ ಬಗ್ಗೆ ಪ್ರಬಂಧ ಕನ್ನಡ Essay On Rainy Days In Kannada, rain prabandha in kannada, Rain Essay in Kannada male prabandha.
Essay in Kannada Language. Children's Day essay in Kannada :ಮಕ್ಕಳ ದಿನವನ್ನು ವಾರ್ಷಿಕವಾಗಿ ನವೆಂಬರ್ 14 ...
9ನೇ ತರಗತಿ ಕನ್ನಡ ನಾಡು ನುಡಿ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 9th Standard Kannada ...
PSI Prabandha In Kannada. PSI Essay kannada. ಕನ್ನಡ ಪ್ರಬಂಧಗಳು psi. psi ಪ್ರಬಂಧಗಳು. kannada essays for psi exam. ಪಿಎಸ್ಐ ಪ್ರಬಂಧಗಳು. ಇತರೆ ಪ್ರಬಂಧಗಳು.
10th Class Prabandha Kannada. ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ. ಜನಸಂಖ್ಯೆ ಪ್ರಬಂಧ. ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ. ಪ್ರಕೃತಿಯ ಬಗ್ಗೆ ಪ್ರಬಂಧ. ಭೂ ಮಾಲಿನ್ಯ ಕುರಿತು ...
ನಮ್ಮ ಕನ್ನಡನಾಡು-ನುಡಿಯ ವಿಶಿಷ್ಟತೆಯನ್ನು ನಮ್ಮ ನಾಡಿನ ಕವಿಗಳು ಮನಸಾರೆ ...
February 21, 2023 by Prasanna. Students can Download Kannada Poem 8 Kannada Naadu Nudi Questions and Answers, Summary, Notes Pdf, Siri Kannada Text Book Class 9 Solutions, Karnataka State Board Solutions help you to revise complete Syllabus and score more marks in your examinations.